ADVERTISEMENT

25 ವರ್ಷಗಳ ಹಿಂದೆ: ಗುರುವಾರ, 26–2–1998

ಪ್ರಜಾವಾಣಿ ವಿಶೇಷ
Published 25 ಫೆಬ್ರುವರಿ 2023, 21:45 IST
Last Updated 25 ಫೆಬ್ರುವರಿ 2023, 21:45 IST
   

ಶಾಸಕರ ಖರೀದಿ: ಕಲ್ಯಾಣ್‌ ವಿರುದ್ಧ ಪಾಲ್‌ ಆರೋಪ

ಲಖನೌ, ಫೆ. 25 (ಯುಎನ್‌ಐ)– ವಿಧಾನಸಭೆಯಲ್ಲಿ ನಾಳೆ ಬಹುಮತ ಸಾಬೀತುಪಡಿಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಅವರು ಹತಾಶರಾಗಿ ಶಾಸಕರ ಖರೀದಿ ಹಾಗೂ ಅಪಹರಣದಲ್ಲಿ ತೊಡಗಿದ್ದಾರೆ ಎಂದು ಲೋಕತಾಂತ್ರಿಕ ಕಾಂಗ್ರೆಸ್‌ ನಾಯಕ ಜಗದಾಂಬಿಕಾ ಪಾಲ್‌ ಇಂದು ಇಲ್ಲಿ ಆರೋಪಿಸಿದರು.‌

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘ಅಗತ್ಯವಿರುವ ಬಹುಮತ ಸಂಪಾದಿಸಲು ಭಾರತೀಯ ಜನತಾ ಪಕ್ಷವು ಎಲ್ಲಾ ಅವ್ಯವಹಾರಗಳಲ್ಲೂ ತೊಡಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.