ADVERTISEMENT

25 ವರ್ಷಗಳ ಹಿಂದೆ: ಗುರುವಾರ, 28-5-1998

ಪ್ರಜಾವಾಣಿ ವಿಶೇಷ
Published 27 ಮೇ 2023, 23:27 IST
Last Updated 27 ಮೇ 2023, 23:27 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ   

ವೀರಪ್ಪನ್‌ಗೆ ಮತ್ತೆ ಮೂವರು ಒತ್ತೆ

ಈರೋಡ್‌, ಮೇ 27 (ಯುಎನ್‌ಐ)– ಶರಣಾಗುವುದಾಗಿ ಹೇಳುತ್ತಿದ್ದ ಕಾಡುಗಳ್ಳ ವೀರಪ್ಪನ್‌ ಮತ್ತೆ ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವ ಮೂಲಕ ಎರಡೂ ರಾಜ್ಯಗಳಿಗೆ ಆಘಾತ ನೀಡಿದ್ದಾನೆ.

ತಮಿಳು ಪತ್ರಿಕೆ ‘ನೆಟ್ರಿಕಣ್‌’ ಸಂಪಾದಕ ಎ.ಎಸ್‌. ಮಣಿ ನೇತೃತ್ವದಲ್ಲಿ ತನ್ನ ಭೇಟಿಗೆ ಬಂದಿದ್ದ ನಾಲ್ವರನ್ನು ವೀರಪ್ಪನ್‌ ದಿಂಬು ಕಾಡಿನಲ್ಲಿ ಒತ್ತೆಯಾಳಾಗಿರಿಸಿಕೊಂಡು ತಾನು ಶಕ್ತಿಹೀನನಲ್ಲ ಎಂದು ಸಾರಿದ್ದಾನೆ. ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ವೀರಪ್ಪನ್‌, ನೆಟ್ರಿಕಣ್‌ ಸಂಪಾದಕ ಮಣಿ ಅವರನ್ನು ಇಂದು ಬಿಡುಗಡೆ ಮಾಡಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.