ADVERTISEMENT

25 ವರ್ಷಗಳ ಹಿಂದೆ | ಸೋಮವಾರ 16 ಜೂನ್ 1997

ಪ್ರಜಾವಾಣಿ ವಿಶೇಷ
Published 15 ಜೂನ್ 2022, 19:45 IST
Last Updated 15 ಜೂನ್ 2022, 19:45 IST
   

ಭ್ರಷ್ಟಾಚಾರ ತಡೆಗೆ ಕಟಿಬದ್ಧ: ಗುಜ್ರಾಲ್‌

ಶಿಮ್ಲಾ, ಜೂನ್‌ 15 (ಪಿಟಿಐ)– ಉನ್ನತ ಹಂತಗಳಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ತಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಪ್ರಧಾನಿ ಐ.ಕೆ.ಗುಜ್ರಾಲ್‌ ಪುನರುಚ್ಚರಿಸಿದ್ದಾರೆ.

ಸಾರ್ವಜನಿಕ ರ್‍ಯಾಲಿಯನ್ನು ಇಲ್ಲಿ ಉದ್ಘಾಟಿಸಿದ ಅವರು ಯಾರು ಎಂಥದ್ದೇ ಉನ್ನತ ಹುದ್ದೆಯಲ್ಲಿರಲಿ ಅಥವಾ ಎಷ್ಟೇ ಪ್ರಭಾವಶಾಲಿಯಾಗಿರಲಿ ಭ್ರಷ್ಟಾಚಾರ ನಡೆಸಿರುವುದು ಕಂಡುಬಂದರೆ ಕ್ರಮ ಜರುಗಿಸದೇ ಬಿಡುವುದಿಲ್ಲ ಎಂದರು.

ADVERTISEMENT

ಸಿಂಗ್‌ ಭೇಟಿ ಮಾಡಿದ ಪಟೇಲ್‌

ಬೆಂಗಳೂರು, ಜೂನ್‌ 15– ಲಂಡನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಅವರನ್ನು ಮುಖ್ಯ ಮಂತ್ರಿ ಜೆ.ಎಚ್‌.ಪಟೇಲ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರ ರನ್ನು ಸೆಳೆಯುವ ಸಲುವಾಗಿ ಬ್ರಿಟನ್‌ ಮತ್ತು ಅಮೆರಿಕಕ್ಕೆ ನಿಯೋಗದೊಂದಿಗೆ ತೆರಳಿರುವ ಪಟೇಲ್‌, ನಿನ್ನೆ ಲಂಡನ್‌ಗೆ ತೆರಳಿದ ಕೂಡಲೇ ಸಿಂಗ್‌ ಅವರನ್ನು ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.