ADVERTISEMENT

25 ವರ್ಷಗಳ ಹಿಂದೆ: ಗುರುವಾರ 6.3.1997

ಪ್ರಜಾವಾಣಿ ವಿಶೇಷ
Published 5 ಮಾರ್ಚ್ 2022, 20:00 IST
Last Updated 5 ಮಾರ್ಚ್ 2022, 20:00 IST
   

ಉತ್ತರಪ್ರದೇಶ: ಭೂಗತ ಗುಂಪುಗಳ ನಿಯಂತ್ರಣಕ್ಕೆ ಕ್ರಮ

ನವದೆಹಲಿ, ಮಾರ್ಚ್ 5 (ಪಿಟಿಐ)– ರಾಷ್ಟ್ರಪತಿ ಆಳ್ವಿಕೆ ಇರುವ ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲು 14 ಅಂಶಗಳ ಕ್ರಿಯಾ ಯೋಜನೆಯೊಂದನ್ನು ಇಂದು ನಡೆದ ಕೇಂದ್ರ ಹಾಗೂ ರಾಜ್ಯದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಂತಿಮಗೊಳಿಸಲಾಯಿತು.

ಉತ್ತರಪ್ರದೇಶದ ಮಾಫಿಯಾ ಗುಂಪುಗಳು ಹಾಗೂ ಭೂಗತ ದೊರೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಈ ಕ್ರಿಯಾಯೋಜನೆ ರೂಪಿಸಲಾಗಿದ್ದು, ಕೇಂದ್ರ ಗೃಹ ಸಚಿವ ಇಂದ್ರಜಿತ್ ಗುಪ್ತಾ ನಾಳೆ ಸಂಸತ್ತಿನಲ್ಲಿ ಯೋಜನೆಯನ್ನು ಪ್ರಕಟಿಸುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.