ADVERTISEMENT

ತ್ಯಾಗಮೂರ್ತಿ ಬಾಹುಬಲಿಗೆ ವೈಭವದ ಮಹಾಮಜ್ಜನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:29 IST
Last Updated 19 ಡಿಸೆಂಬರ್ 2018, 19:29 IST

ತ್ಯಾಗಮೂರ್ತಿ ಬಾಹುಬಲಿಗೆ ವೈಭವದ ಮಹಾಮಜ್ಜನ

ಶ್ರವಣಬೆಳಗೊಳ, ಡಿ. 19– ಅನನ್ಯ ಚೆಲುವು, ಅಲೌಕಿಕ ಕಾಂತಿಯ ಮಹಾತ್ಯಾಗಿ ಗೊಮ್ಮಟನ ಶಿಖರ ಸದೃಶ ವಿಗ್ರಹಕ್ಕೆ ಇಂದು ಕುಂಭ ಲಗ್ನದ ಸುಮೂರ್ತದಲ್ಲಿ ವೈಭವದಿಂದ 85ನೇ ಮಹಾಮಜ್ಜನ ನೆರವೇರಿತು.

ರಾಜೀವ್ ಕ್ರೀಡಾಂಗಣ

ADVERTISEMENT

ಕೊಚ್ಚಿ, ಡಿ. 19 (ಯುಎನ್‌ಐ)– ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ನಿರ್ಮಿಸಲಾದ ರಾಜೀವ್ ಸ್ಮಾರಕ ಒಳಾಂಗಣ ಕ್ರೀಡಾಂಗಣವನ್ನು ಸೋನಿಯಾ ಗಾಂಧಿ ಅವರು ಇಂದು ರಾಷ್ಟ್ರಕ್ಕೆ ಅರ್ಪಿಸಿದರು.

ಗ್ರಾಮ ಬಂದ್ ಚಳವಳಿ

ಅಹ್ಮದಾಬಾದ್, ಡಿ. 19 (ಯುಎನ್ಐ)– ಭಾರತೀಯ ಕಿಸಾನ್ ಸಂಘದ ಕರೆಯ ಮೇಲೆ ರಾಜ್ಯಾದ್ಯಂತ ನಡೆದಿರುವ ‘ಗ್ರಾಮ ಬಂದ್’ ಚಳವಳಿ ಇಂದು ಮೂರನೆಯ ದಿನ‍ಪ್ರವೇಶಿಸಿದೆ. ಈ ಮಧ್ಯೆ ರಾಜಕೋಟ ಜಿಲ್ಲೆಯ ಪರ್ದಿ ಗ್ರಾಮದಲ್ಲಿ ಉದ್ರಿಕ್ತ ರೈತರ ಗುಂಪನ್ನು ಚದುರಿಸಲು ಪೊಲೀಸರು ನಿನ್ನೆ ರಾತ್ರಿ ಗೋಲಿಬಾರ್ ಮಾಡಿದಾಗ ಒಬ್ಬ ಯುವಕ ಸತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.