ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಬುಧವಾರ, 27–9–1995

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 19:31 IST
Last Updated 26 ಸೆಪ್ಟೆಂಬರ್ 2020, 19:31 IST
   

ಬಡವರಿಗೆ ಮನೆ, ನಿವೇಶನ 483 ಕೋಟಿ ರೂ ಯೋಜನೆ
ಬೆಂಗಳೂರು, ಸೆ.26–
ಆಶ್ರಯ, ಅಂಬೇಡ್ಕರ್ ಮತ್ತು ಇಂದಿರಾ ಆವಾಸ್ ಯೋಜನೆಗಳಡಿ ರಾಜ್ಯದಲ್ಲಿ ಪ್ರಸಕ್ತ ವರ್ಷ 3.39 ಲಕ್ಷ ನಿವೇಶನ ರಹಿತ ಬಡ ಕುಟುಂಬಗಳಿಗೆ ಉಚಿತವಾಗಿ ನಿವೇಶನ ಒದಗಿಸಲು ಹಾಗೂ 1.87ಲಕ್ಷ ವಸತಿ ರಹಿತರಿಗೆ ರಿಯಾಯ್ತಿ ದರದಲ್ಲಿ ವಸತಿ ಸೌಕರ್ಯವನ್ನು ಕಲ್ಪಿಸಲು 483 ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
ಈ ಯೋಜನೆಯ ಪ್ರಕಾರ ವಾರ್ಷಿಕ 11,800 ರೂಪಾಯಿಗಿಂತ ಕಡಿಮೆ ಆದಾಯವುಳ್ಳವರಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 1.75ಲಕ್ಷ ನಿವೇಶನ ಹಾಗೂ 1.26 ಲಕ್ಷ ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.