ADVERTISEMENT

50 ವರ್ಷಗಳ ಹಿಂದೆ: ‘ಸಮೃದ್ಧ, ಸ್ವಾಯತ್ತ’ ಕರ್ನಾಟಕ ಸ್ಥಾಪನೆಗೆ ಹೊಸ ರಾಜಕೀಯ ಪಕ್ಷ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:30 IST
Last Updated 16 ಜುಲೈ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಸಮೃದ್ಧ, ಸ್ವಾಯತ್ತ’ ಕರ್ನಾಟಕ ಸ್ಥಾಪನೆಗೆ ಹೊಸ ರಾಜಕೀಯ ಪಕ್ಷ

ಬೆಂಗಳೂರು, ಜುಲೈ 16– ಸಮಾಜವಾದದ ಗುರಿಯೊಡನೆ ‘ಸಮೃದ್ಧ, ಸ್ವಾಯತ್ತ ಕರ್ನಾಟಕದ ಸ್ಥಾಪನೆಗಾಗಿ ಹೋರಾಟ ನಡೆಸುವ ರಾಜ್ಯ ಮಟ್ಟದ ಹೊಸ ಪಕ್ಷಬವೊಂದು ಅಸ್ಥಿತ್ವಕ್ಕೆ ಬಂದಿದೆ.

ಇತ್ತೀಚಿಗೆ ಸೋಷಲಿಸ್ಟ್‌ ಪಕ್ಷವನ್ನು ಬಿಟ್ಟ ವಿಧಾನಸಭಾ ಸದಸ್ಯ ಶ್ರೀ ಎಸ್‌. ಬಂಗಾರಪ್ಪ ಅವರು ನೂತನ ಪಕ್ಷದ ರಚನೆಯನ್ನು ಇಂದು ಪ್ರಕಟಿಸಿದರು.

ADVERTISEMENT

ಸ್ವಾತಂತ್ರ್ಯದ ರಜತ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್‌ 14ರಂದು ವಿಧಾನಮಂಡಲದ ಜಂಟಿ ಅಧಿವೇಶನ ನಡೆಯುವ ಕಾಲದಲ್ಲಿ ನಿರುದ್ಯೋಗಿ ಎಂಜಿನಿಯರುಗಳ ಪ್ರದರ್ಶನವೊಂದನ್ನು ನಡೆಸುವುದು ಈ ಪಕ್ಷ ಕೈಗೊಳ್ಳಲಿರುವ ಪ್ರಥಮ ಚಳುವಳಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.