ADVERTISEMENT

50 ವರ್ಷಗಳ ಹಿಂದೆ: ಬುಧವಾರ 16.6.1971

50 ವರ್ಷಗಳ ಹಿಂದೆ ಬುಧವಾರ 16.6.1971

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST
   

ಜಗತ್ತು ಹೊಣೆಯಿಂದ ತಪ್ಪಿಸಿಕೊಳ್ಳಲು ಬಿಡೆವು: ಇಂದಿರಾ

ನವದೆಹಲಿ, ಜೂನ್ 15– ಬಾಂಗ್ಲಾ ದೇಶದ ನಿರಾಶ್ರಿತರ ಸಮಸ್ಯೆಯನ್ನು ಎದುರಿಸಲು ಭಾರತ ತನ್ನ ಕೈಮೀರಿ ಶ್ರಮಿಸುವುದಾದರೂ ಆ ಬಗ್ಗೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.

ಭಾರತಕ್ಕೆ ಲಕ್ಷಾಂತರ ಮಂದಿ ನಿರಾಶ್ರಿತರು ವಲಸೆ ಬಂದಿರುವ ವಿಷಯದ ಬಗ್ಗೆ ಮೂರು ಗಂಟೆಗಳ ಕಾಲ ನಡೆದ ಚರ್ಚೆಗೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು ‘ಹೊರಗಡೆಯಿಂದ ನೆರವು ಬರಲಿ, ಬಿಡಲಿ, ಜಗತ್ತಿನ ಈ ಭಾಗದಲ್ಲಿ ಸಂಭವಿಸು ತ್ತಿರುವ ಘಟನೆಗಳ ಪರಿಣಾಮವು ಅಂತರ ರಾಷ್ಟ್ರೀಯ ಸಮುದಾಯದ ಮೇಲೆ ಹಾನಿಯುಂಟು ಮಾಡುತ್ತದೆ’ ಎಂದರು.

ADVERTISEMENT

‘ಸರ್ಕಾರದಿಂದ ಕರ್ತವ್ಯಲೋಪ’

ನವದೆಹಲಿ, ಜೂನ್ 15– ನಿರಾಶ್ರಿತರ ಪುನರ್‌ವ್ಯವಸ್ಥೆ ವಿಷಯದಲ್ಲಾಗಲಿ
ಅಥವಾ ಹೋರಾಟಕ್ಕೆ ನೆರವಾಗುವು
ದರಲ್ಲಾಗಲಿ ಸರ್ಕಾರ ತನ್ನ ಕೈಮೀರಿ ಶ್ರಮಿಸು ತ್ತಿಲ್ಲವೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ಇಂದು ಅಭಿಪ್ರಾಯ
ಪಟ್ಟರೆಂದು ಗೊತ್ತಾಗಿದೆ.

ಬಾಂಗ್ಲಾ ದೇಶದ ಸಮಸ್ಯೆ ಕುರಿತು ಚರ್ಚಿಸಲು ಇಲ್ಲಿ ಸಭೆ ಸೇರಿದ್ದ ಅವರು ಬಾಂಗ್ಲಾ ದೇಶದ ಬಗ್ಗೆ ಸರ್ಕಾರದ ನೀತಿಯ ವಿಷಯದಲ್ಲಿ ಸ್ಪಷ್ಟೀಕರಣ ಕೇಳುವುದಕ್ಕೆ ಪ್ರಧಾನಿ ಭೇಟಿ ಮಾಡಲೂ ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.