ADVERTISEMENT

50 ವರ್ಷಗಳ ಹಿಂದೆ: ಭಾನುವಾರ, ಜುಲೈ 4,1971

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 21:30 IST
Last Updated 3 ಜುಲೈ 2021, 21:30 IST
   

ತಿರುವನಂತಪುರ, ಜುಲೈ 3– ಅಂತರರಾಜ್ಯ ಜಲವಿವಾದ ಶಾಸನದ ಪ್ರಕಾರ, ಕೇರಳ, ಮೈಸೂರು ಮತ್ತು ತಮಿಳುನಾಡುಗಳ ಮಧ್ಯೆ ಇರುವ ಕಾವೇರಿ ಜಲ ವಿವಾದವನ್ನು ನ್ಯಾಯ ಮಂಡಲಿ ಇತ್ಯರ್ಥಕ್ಕೆ ಒಪ್ಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೇರಳ ಆಗ್ರಹಪಡಿಸಲಿದೆಯೆಂದು ಕೇರಳದ ಕಾಮಗಾರಿ ಸಚಿವ ವಿ.ಕೆ. ದಿವಾಕರನ್‌ ಇಂದು ತಿಳಿಸಿದರು.

ಕೇಂದ್ರ ನೀರಾವರಿ ಹಾಗೂ ವಿದ್ಯುತ್‌ ಸಚಿವ ಡಾ. ಕೆ.ಎಲ್‌. ರಾವ್ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗದೆ ಹೋಗಿರುವುದರಿಂದ, ನ್ಯಾಯ ಮಂಡಳಿಗೆ ವಿವಾದ ಸಲ್ಲಿಸುವುದೊಂದೇ ಈಗಿರುವ ಮಾರ್ಗವೆಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT