ADVERTISEMENT

50 ವರ್ಷಗಳ ಹಿಂದೆ | ಶನಿವಾರ, 13–6–1970

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 16:28 IST
Last Updated 12 ಜೂನ್ 2020, 16:28 IST

ಕೃಷಿ ಸಂಪತ್ತು ತೆರಿಗೆವಿರುದ್ಧ ಪಂಜಾಬ್‌ ರಿಟ್‌
ಚಂಡೀಗಡ, ಜೂನ್‌ 12–
ಜಮೀನಿನ ಮೇಲೆ ಸಂಪತ್ತು ತೆರಿಗೆ ವಿಧಿಸುವುದರ ರಾಜ್ಯಾಂಗ ಬದ್ಧತೆಯನ್ನು ಪ್ರಶ್ನಿಸಿ ಪಂಜಾಬ್‌ ಸರ್ಕಾರ ಇಂದು ಪಂಜಾಬ್‌– ಹರಿಯಾಣ ಹೈಕೋರ್ಟಿನಲ್ಲಿ ರಿಟ್‌ ಅರ್ಜಿಯೊಂದನ್ನು ಸಲ್ಲಿಸಿತು.

ಭಾರತ ಸಂವಿಧಾನದ 226 ಮತ್ತು 227ನೇ ವಿಧಿಗಳ ಪ್ರಕಾರ ಈ ರಿಟ್‌ ಸಲ್ಲಿಸಲಾಗಿದೆ. ಕೃಷಿ ಜಮೀನಿನ ಮೇಲೆ ಸಂಪತ್ತು ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಇರುವ ಸಂಪತ್ತು ತೆರಿಗೆ ಶಾಸನವು ರಾಜ್ಯಾಂಗದ ವಿರುದ್ಧವೆಂದು ಘೋಷಿಸುವಂತೆ ಅರ್ಜಿ ಕೋರಿದೆ.

ಪೊಲೀಸರ ಜೊತೆ ನಕ್ಸಲೀಯರ ಘರ್ಷಣೆ: ಗುಂಡಿಗೆ ಇಬ್ಬರು ಬಲಿ
ಮಚಲೀಪಟ್ಟಣ, ಜೂನ್‌ 12–
ಇಲ್ಲಿಗೆ ಏಳು ಮೈಲಿ ದೂರದಲ್ಲಿರುವ ಮಾಂಗಿನಪುಡಿ ಸಮುದ್ರದಂಡೆ ಪ್ರದೇಶದಲ್ಲಿ ಇಂದು ಮುಂಜಾನೆ ಬಾಂಬ್‌ ಮತ್ತು ಕೋವಿಯಿಂದ ದಾಳಿ ನಡೆಸಿದ ಇಪ್ಪತ್ತೈದು ಮಂದಿ ನಕ್ಸಲೀಯರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ನಕ್ಸಲೀಯರು ಸತ್ತರು.

ADVERTISEMENT

ಪೊಲೀಸರು ನಕ್ಸಲೀಯರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಈ ಘರ್ಷಣೆ ಸಂಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.