ADVERTISEMENT

50 ವರ್ಷಗಳ ಹಿಂದೆ | ಬುಧವಾರ, 8–7–1970

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 19:30 IST
Last Updated 7 ಜುಲೈ 2020, 19:30 IST

ರಾಜ್ಯ ಸಾರಿಗೆ ಸಂಸ್ಥೆಯ19 ಸಹಸ್ರ ನೌಕರರಿಗೆವೇತನ ಭತ್ಯೆ ಏರಿಕೆ

ಬೆಂಗಳೂರು, ಜುಲೈ 7– ಮೈಸೂರು ರಾಜ್ಯ ಸಾರಿಗೆ ಸಂಸ್ಥೆಯ 3ನೇ ಮತ್ತು 4ನೇ ದರ್ಜೆಯ ಹತ್ತೊಂಬತ್ತು ಸಾವಿರ ಮಂದಿ ನೌಕರರು ತಮ್ಮ ಸೇವಾ ಅವಧಿಗೆ ಅನುಗುಣವಾಗಿ ವೇತನ ಬಡ್ತಿ ಪಡೆಯುವರು.

ವೇತನ ಭತ್ಯೆ ಮುಂತಾದವುಗಳ ಏರಿಕೆಯ ರೂಪದಲ್ಲಿ ಈ ನೌಕರರು ವರ್ಷಕ್ಕೆ 95.7 ಲಕ್ಷ ರೂಪಾಯಿಗಳನ್ನು ಪಡೆಯುವರು.

ADVERTISEMENT

ಮತ್ತೆ ಮುಗಿಲತ್ತ ಕಾತರದ ದೃಷ್ಟಿ

ಬೆಂಗಳೂರು, ಜುಲೈ 7– ನಿರೀಕ್ಷೆಗಿಂತ ಮೊದಲೇ ಬಂದು ರೈತರಲ್ಲಿ ವರ್ಷದ ಬೆಳೆಯ ಭರವಸೆ ಮೂಡಿಸಿದ
ಮುಂಗಾರು ಕ್ರಮೇಣ ಕಡಿಮೆಯಾಗಿ ಕೆಲ ಮಟ್ಟಿನ ಕಾತರವನ್ನುಂಟು ಮಾಡಲಾರಂಭಿಸಿದೆ.

ಮಳೆಯನ್ನು ನಂಬಿ ಎಂದಿನ ತೀವ್ರ ಅಭಾವದ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಹೋಗಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.