ಕೆಂಗಲ್ರ ಹೇಳಿಕೆ ನಿರಾಧಾರ: ಇಂದಿರಾಗೆ ಅರಸು ವಿವರಣೆ
ನವದೆಹಲಿ, ಆಗಸ್ಟ್ 24– ಅನೇಕ ಮಂದಿ ಶಾಸಕರಿಗೆ ಮೈಸೂರು ಸಂಪುಟದ ವಿಷಯದಲ್ಲಿ ಅಸಮಾಧಾನವಾಗಿದೆಯೆಂಬ ಮಾಜಿ ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರ ವಾದ ನಿರಾಧಾರವಾದುದೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ತಿಳಿಸಿದರು.
ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ ಅರಸು ಅವರು ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷ ಶಂಕರ್ ದಯಾಳ್ ಶರ್ಮಾ ಹಾಗೂ ಕೇಂದ್ರ ವಸತಿ ಸಚಿವ ಉಮಾಶಂಕರ್ ದೀಕ್ಷಿತ್ ಅವರನ್ನೂ ಭೇಟಿ ಮಾಡಿದ್ದರು. ಅರಸು ಅವರು ಮೈಸೂರು ನಾಯಕತ್ವಕ್ಕೆ ಹನುಮಂತಯ್ಯ
ನವರು ಹಾಕಿರುವ ಸವಾಲಿನ ಬೆಳಕಿನಲ್ಲಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನೂ, ಭೂಪರಿಮಿತಿ ವಿಷಯವನ್ನೂ ಪ್ರಧಾನಿ ಯೊಡನೆ ಚರ್ಚಿಸಿದರೆಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.