ಕೆಂಗಲ್ ಚಟುವಟಿಕೆ ಬಗೆಗೆ ಹೈಕಮಾಂಡ್ ಖಾರ; ಶಿಸ್ತು ಕ್ರಮ
ನವದೆಹಲಿ, ಆ.25– ಮಾಜಿ ರೈಲ್ವೆ ಸಚಿವ ಕಂಗಲ್ ಹನುಮಂತಯ್ಯನವರ ಇತ್ತೀಚಿನ ಚಟುವಟಿಕೆಗಳ ಸಂಬಂಧದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಕೆಂಗಲ್ರ ವಿರುದ್ಧ ಹೈಕಮಾಂಡ್ ಶೀಘ್ರವೇ ಶಿಸ್ತು
ಕ್ರಮ ಕೈಗೊಳ್ಳುವುದೆಂದು ನಂಬಲಾಗಿದೆಯೆಂದು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಅರಸು ಸಂಪುಟದ ವಿರುದ್ಧ ಹನುಮಂತಯ್ಯನವರ ಕ್ರಮವನ್ನು ಕಾಂಗ್ರೆಸ್ ಹೈಕಮಾಂಡ್ ತೀವ್ರವಾಗಿ ಪರಿಗಣಿಸಿದೆಯೆಂದು ವರದಿಯಾಗಿದೆ.
ಇಂದು ಮಧ್ಯಾಹ್ನ ಪ್ರದೇಶ ಕಾಂಗ್ರೆಸ್ ಸಮಿತಿಯ ವರದಿಯನ್ನು ಕುರಿತು
ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಶ್ನಿಸಿದಾಗ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಯಾವುದೇ ಶೀಘ್ರ ಕ್ರಮವನ್ನು ಶಿಫಾರಸು ಮಾಡುವುದು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧಿಕಾರಕ್ಕೆ ಸೇರಿದ್ದೇ ಹೊರತು ತಮ್ಮದಲ್ಲವೆಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.