ಕಾಶ್ಮೀರ: ಹತೋಟಿ ರೇಖೆ ಗುರುತಿಸಿದ ನಂತರವೇ ಭಾರತ ಸೇನೆ ವಾಪಸು
ನವದೆಹಲಿ, ನವೆಂಬರ್ 5– ಭಾರತ ಹಾಗೂ ಪಾಕಿಸ್ತಾನಗಳ ಹಿರಿಯ ಕಮ್ಯಾಂಡರುಗಳು ಪರಸ್ಪರ ಒಪ್ಪಿ ಸೂಚಿಸಿರುವ 19 ಭೂಪಟಗಳ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಹತೋಟಿ ರೇಖೆ ಗುರುತಿಸುವ ಕಾರ್ಯ ಮುಗಿಸಿದ ಮೇಲೆ ಶೀಘ್ರವೇ ಭಾರತೀಯ ಪಡೆಗಳನ್ನು ಅಂತರರಾಷ್ಟ್ರೀಯ ಗಡಿ ರೇಖೆಗೆ ಹಿಂತೆಗೆದುಕೊಳ್ಳಲು ಸಿದ್ಧವಾಗಿರುವುದಾಗಿ ಭಾರತದ ಪ್ರಧಾನ ದಂಡನಾಯಕ ಜನರಲ್ ಮಣೇಕ್ ಷಾ ಅವರು ಪಾಕಿಸ್ತಾನದ ಜನರಲ್ ಟಕ್ಕಾಖಾನ್ ಅವರಿಗೆ ಇಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.