ಪೂರ್ವ ಪಾಕ್ ಸ್ವಾತಂತ್ರ್ಯ ಸಂಗ್ರಾಮ ಉಗ್ರರೂಪ ತಳೆಯುವ ಸಂಭವ
ಕರಾಚಿ, ಮಾರ್ಚ್ 8– ಅವಾಮಿ ಲೀಗ್ ನಾಯಕ ಮುಜೀಬುರ್ ರೆಹಮಾನರ ಬೇಡಿಕೆಗಳನ್ನು ಅಧ್ಯಕ್ಷ ಯಾಹ್ಯಾಖಾನರು ಪೂರೈಸದಿದ್ದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ತಳೆಯುವ ನಿರೀಕ್ಷೆಯಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭಾಗವಹಿಸಲು ಪೂರ್ವ ಪಾಕಿಸ್ತಾನದ ನಾಯಕ ಷೇಖ್ ಮುಜೀಬುರ್ ರೆಹಮಾನರು ಒಡ್ಡಿರುವ ಷರತ್ತುಗಳನ್ನು ಅಧ್ಯಕ್ಷ ಯಾಹ್ಯಾಖಾನರು ಒಪ್ಪುವರೇ ಇಲ್ಲವೇ ಎಂಬುದರ ಮೇಲೆ ಪಾಕಿಸ್ತಾನದಲ್ಲಿ ಈಗ ತಲೆದೋರಿರುವ ಬಿಕ್ಕಟ್ಟಿನ ಪರಿಹಾರ ಅವಲಂಬಿತವಾಗಿದೆ ಎಂದು ಅಧಿಕೃತ ಮೂಲಗಳು ಇಂದು ತಿಳಿಸಿದವು.
ನಾಳೆ ಮತ ಎಣಿಕೆ; ಶನಿವಾರದ ಹೊತ್ತಿಗೆ ಪೂರ್ಣ ಫಲಿತಾಂಶ
ನವದೆಹಲಿ, ಮಾರ್ಚ್ 8– ಪಶ್ಚಿಮ ಬಂಗಾಳ, ಕೇರಳ ಮತ್ತು ಕೆಲವು ಮತಗಟ್ಟೆಗಳ ಹೊರತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಮುಗಿದಿದ್ದು, ಬುಧವಾರ ಬೆಳಿಗ್ಗೆ ಮತಗಳ ಎಣಿಕೆ ಪ್ರಾರಂಭವಾಗುತ್ತದೆ.
ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಎಲ್ಲ ಫಲಿತಾಂಶ ಮಾರ್ಚ್ 13ರಂದು ಸಂಜೆ ವೇಳೆಗೆ ದೊರೆಯ ಬಹುದೆಂದು ಉಪ ಪ್ರಧಾನ ಚುನಾವಣಾ ಕಮಿಷನರ್ ಶ್ರೀ ಪಿ.ಐ.ಜೇಕಬ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.