ADVERTISEMENT

50 ವರ್ಷಗಳ ಹಿಂದೆ | ಬೆಲೆ ಏರಿಕೆಯ ಗಾಯಕ್ಕೆ ಅರ್ಥ ಮಂತ್ರಿಯ ಕ್ರೂರ ಕರ ಪ್ರಹಾರ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನವದೆಹಲಿ, ಫೆ. 28– ಅಗಾಧ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸುತ್ತಿರುವ ಶ್ರೀಸಾಮಾನ್ಯನು, ಕೇಂದ್ರ ಹಣಕಾಸು ಸಚಿವ ಶ್ರೀ ವೈ.ಬಿ. ಚವಾಣರು 74–75ನೇ ಸಾಲಿನ ಮುಂಗಡ ಪತ್ರದಲ್ಲಿ ಸೂಚಿಸಿರುವ 212 ಕೋಟಿ ರೂ.ಗಳ ಹೊಸ ತೆರಿಗೆಯ ಭಾರಿ ಪೆಟ್ಟಿಗೆ ಒಳಗಾಗಿದ್ದಾನೆ.

ಅರ್ಥ ಸಚಿವರು ಸೂಚಿಸಿರುವ ಹೊಸ ತೆರಿಗೆ ಸಲಹೆಗಳಿಂದಾಗಿ ಇನ್ನು ಮುಂದೆ ಬಟ್ಟೆ, ಅಂಚೆಕಾರ್ಡು, ಕವರು, ತಂತಿ, ಟೆಲಿಫೋನ್‌, ಸಿಗರೇಟು, ಕಾಗದ ಮೊದಲಾದ ದಿನನಿತ್ಯದ ಎಲ್ಲ ವಸ್ತುಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇಂದು ಸಂಸತ್ತಿನಲ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ವಿಸ್ಕಿ, ಬ್ರಾಂದಿ, ಜಿನ್‌, ಮೋಟಾರ್‌ ವಾಹನಗಳು, ಸ್ಕೂಟರುಗಳು, ಟೆಲಿವಿಷನ್ ಸೆಟ್‌ಗಳು, ಸೂಪರ್‌ಫೈನ್‌, ಫೈನ್‌ ಹಾಗೂ ಮಧ್ಯಮ ದರ್ಜೆ ಬಟ್ಟೆ, ಏರ್‌ ಕಂಡೀಷನರುಗಳು, ರೆಫ್ರಿಜರೇಟರುಗಳು ಮೊದಲಾದವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT