ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 21–8–1970

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 15:10 IST
Last Updated 20 ಆಗಸ್ಟ್ 2020, 15:10 IST
   

ಚಳ್ಳಕೆರೆ ಬಳಿ ಭಾರಿ ಕುರಿ ಅಭಿವೃದ್ಧಿ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ
ಬೆಂಗಳೂರು, ಆ. 20–
ಚಳ್ಳಕೆರೆ ತಾಲ್ಲೂಕಿನ ಒರವು–ಕುದಾಪುರ ಪ್ರದೇಶದಲ್ಲಿ ಕುರಿ ತಳಿ ಅಭಿವೃದ್ಧಿಯ ಬೃಹತ್‌ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ನೀಡಿದೆ.

ಈ ವಿಷಯವನ್ನು ಇಂದು ವರಿದಿಗಾರರಿಗೆ ತಿಳಿಸಿದ ಪಶುಸಂಗೋಪನಾ ಸ್ಟೇಟ್‌ ಸಚಿವ ಜಿ.ಬಿ. ಶಂಕರರಾವ್‌ರವರು 28 ಲಕ್ಷ 70 ಸಾವಿರ ರೂ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ 9,791 ಎಕರೆ ಜಮೀನನ್ನು ಬಿಡುಗಡೆ ಮಾಡಿದೆಯೆಂದು ತಿಳಿಸಿದರು.

ಕೇಂದ್ರ ಸರ್ಕಾರವು ಇಂತಹ ಕ್ಷೇತ್ರಗಳನ್ನು ಏಳು ರಾಜ್ಯಗಳಲ್ಲಿ ಸ್ಥಾಪಿಸಲಿದೆ.

ADVERTISEMENT

ಸನ್ಯಾಲ್‌ ಬಂಧನಕ್ಕೆ ನಕ್ಸಲೀಯರ ಕೋಪ: ಟ್ರ್ಯಾಮ್‌, ಬಸ್‌ಗಳಿಗೆ ಅಗ್ನಿಸ್ಪರ್ಶ
ಕಲ್ಕತ್ತ, ಆ. 20–
ಮಧ್ಯ ಕಲ್ಕತ್ತಾದಲ್ಲಿ ನಕ್ಸಲೀಯರು ಇಂದು ಬೆಳಿಗ್ಗೆ ಟ್ರ್ಯಾಮ್‌ ಒಂದಕ್ಕೆ ಬೆಂಕಿ ಹಾಕಿದರು.

ನಕ್ಸಲೀಯ ನಾಯಕ ಕಾನು ಸನ್ಯಾಲ್‌ರನ್ನು ನಿನ್ನೆ ಸಿಲಿಗುರಿಯಲ್ಲಿ ಬಂಧಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಈ ಘಟನೆಗಳು ಜರುಗಿದುವೆಂದು ನಂಬಲಾಗಿದೆ.‌ ಶಾಂಪುಕುರ್ ‌ಪ್ರದೇಶದಲ್ಲಿ 2 ಮಹಡಿ ಬಸ್‌ಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿ ಜಖಂಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.