ADVERTISEMENT

50 ವರ್ಷಗಳ ಹಿಂದೆ | ಶನಿವಾರ 14–3–1970

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST

ರಾಜ್ಯ ಸರ್ಕಾರಿ ನೌಕರರ ಕನಿಷ್ಠ ನಿವೃತ್ತಿ ವೇತನ 40 ರೂ.
ಬೆಂಗಳೂರು, ಮಾರ್ಚ್‌ 13–
ರಾಜ್ಯದ ಸರ್ಕಾರಿ ನೌಕರರ ಕನಿಷ್ಠ ನಿವೃತ್ತಿ ವೇತನವನ್ನು ಈಗ ಇರುವ 30 ರೂ.
ನಿಂದ 40 ರೂ.ಗೆ ಹೆಚ್ಚಿಸಲು ತಾವು ನಿರ್ಧರಿಸಿರುವುದಾಗಿ ಅರ್ಥ ಸಚಿವ ಶ್ರೀರಾಮಕೃಷ್ಣ ಹೆಗಡೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಕಾವೇರಿ ಬಯಲಿನ ನೀರಾವರಿ ಯೋಜನೆ ಕಾರ್ಯ ನಿಲ್ಲದು: ವೀರೇಂದ್ರ ಪಾಟೀಲ್ ಸ್ಪಷ್ಟನೆ
ಬೆಂಗಳೂರು ಮಾರ್ಚ್‌ 13–
ಕೇಂದ್ರದ ನೆರವು ಬಂದರೂ ಸರಿಯೇ, ಬರದಿದ್ದರೂ ಸರಿಯೇ ಕಾವೇರಿ ಬಯಲಿನಲ್ಲಿ ಆರಂಭ ವಾಗಿರುವ ನೀರಾವರಿ ಯೋಜನೆಗಳನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ಮತ್ತೆ ಸ್ಪಷ್ಟಪಡಿಸಿದರು.

ಧಾರವಾಡ, ಬಿದರೆ ಜಿಲ್ಲೆಗಳ ಆದ್ಯಂತ ವ್ಯವಹಾರ ಬಂದ್
ಧಾರವಾಡ/ ಬಿದರೆ, ಮಾರ್ಚ್‌ 13–
ಮೈಸೂರು– ಮಹಾರಾಷ್ಟ್ರ ಗಡಿಪ್ರಶ್ನೆ ಕುರಿತು ಪ್ರಧಾನಮಂತ್ರಿ ಸೂಚಿಸಿರುವ ಇತ್ತೀಚಿನ ಸಲಹೆಗಳಿಗೆ ಪ್ರತಿಭಟನೆ ವ್ಯಕ್ತಪಡಿಸಲು ಇಡೀ ಧಾರಾವಾಡ ಜಿಲ್ಲೆ ಹಾಗೂ ಬಿದರೆ ಜಿಲ್ಲೆಗಳು ಇಂದು ಆಚರಿಸಿದ ಬಂದ್‌ ಸಂಪೂರ್ಣ ಯಶಸ್ವಿ ಆಗಿತ್ತು. ಎರಡೂ ಜಿಲ್ಲೆಗಳ ಎಲ್ಲ ಪಟ್ಟಣಗಳಲ್ಲೂ ಎಲ್ಲ ವ್ಯವಹಾರವೂ ಸ್ಥಗಿತ ಆಗಿತ್ತು.

ADVERTISEMENT

ಮೈಸೂರು ಹಾಗೂ ಬಿಜಾಪುರ ನಗರಗಳೂ ಶಾಂತಿಯುತ ಬಂದ್ ಆಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.