ADVERTISEMENT

50 ವರ್ಷಗಳ ಹಿಂದೆ: ಗುರುವಾರ, 29–10–1970

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 1:49 IST
Last Updated 29 ಅಕ್ಟೋಬರ್ 2020, 1:49 IST
   

ಪಂಚಾಯಿತಿಗೆ ಜಲವಿವಾದ ಒಪ್ಪಿಸಿದರೆ ಅನಿಷ್ಟ ಪರಿಣಾಮ: ಕೇಂದ್ರಕ್ಕೆ ಎಚ್ಚರಿಕೆ

ಬೆಂಗಳೂರು, ಅ. 28– ಅನೇಕ ವರ್ಷಗಳಿಂದ ತನ್ನ ಮುಂದಿರುವ ಕಾವೇರಿ ಯೋಜನೆಗಳಿಗೆ ಮಂಜೂರಾತಿ ನೀಡದೆ, ಕಾವೇರಿ ನೀರು ವಿವಾದವನ್ನು ಕೇಂದ್ರ ಸರ್ಕಾರ ಪಂಚಾಯಿತಿಗೆ ಒಪ್ಪಿಸಿದಲ್ಲಿ, ‘ಅನಿಷ್ಟ ಪರಿಣಾಮಗಳಿಗೆ’ ಅವಕಾಶವಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಇಲ್ಲಿ ಇಂದು ಎಚ್ಚರಿಕೆ ನೀಡಿದರು.

‘ಕೇಂದ್ರ ಸರ್ಕಾರ ತನ್ನ ತೀರ್ಮಾನವನ್ನು ಪ್ರಕಟಿಸಲಿ. ನಾನು ನನ್ನ ಕಾರ್ಯಕ್ರಮವನ್ನು ಪ್ರಕಟಿಸುತ್ತೇನೆ’ ಎಂದು ಘೋಷಿಸಿದರು.

ADVERTISEMENT

17 ಮಂದಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರು, ಅ. 28– ಈ ವರ್ಷದ ರಾಜ್ಯೋತ್ಸವದಂದು ಹದಿನೇಳು ಮಂದಿಗೆ ರಾಜ್ಯ ಪ್ರಶಸ್ತಿ ನೀಡಲಾಗುವುದು.

ಪ್ರಶಸ್ತಿಗೆ ಸಮಾಜ ಸೇವಕರು, ಸಾಹಿತಿಗಳು, ಕಲಾವಿದರು, ಪ್ರಮುಖ ಸರ್ಕಾರಿ ಅಧಿಕಾರಿಗಳನ್ನು ಆರಿಸಲಾಗಿದೆ. ಸರ್ವಶ್ರೀ ಪಿ.ಐ. ಜೋಸೆಫ್‌, ಎಚ್‌.ವಿ. ನಾರಾಯಣರಾವ್‌, ಶ್ರೀಮತಿ ಗಂಗೂಬಾಯಿ ಹಾನಗಲ್‌, ಜಿ.ಪಿ ರಾಜರತ್ನಂ, ಬಿ.ಆರ್‌.ಪಂತುಲು, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಪಂಡಿತ ಪುಟ್ಟರಾಜ ಗವಾಯಿ ಮೊದಲಾದವರು ಇವರಲ್ಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.