ರಾಜ್ಯಸಭೆಯಿಂದ ಹೊರಕ್ಕೆ
ನವದೆಹಲಿ, ಆಗಸ್ಟ್ 12– ಸಭೆಯಿಂದ ಹೊರಹೋಗಲು ನಿರಾಕರಿಸಿದ ಎಸ್.ಎಸ್.ಪಿ.ಯ ರಾಜನಾರಾಯಣ್ ಅವರನ್ನು ರಾಜ್ಯಸಭೆಯ ಈ ಅಧಿವೇಶನದ ಉಳಿದ ಅವಧಿಯಿಂದ ಸಸ್ಪೆಂಡ್ ಮಾಡಿದ ನಂತರ ಅವರನ್ನು ಬಲಾತ್ಕಾರವಾಗಿ ಹೊರಕ್ಕೆ ಒಯ್ಯಲಾಯಿತು.
ಷೇಖ್ ಮುಜೀಬುರ್ ರಹಮಾನರ ಬಿಡುಗಡೆ ಕುರಿತ ಗಮನ ಸೆಳೆಯುವ ಸೂಚನೆಯನ್ನು ಸಭೆ ಚರ್ಚಿಸುತ್ತಿದ್ದಾಗ, ಪದೇ ಪದೇ ತಾವು ಮಾಡುತ್ತಿದ್ದ ಕೋರಿಕೆಯನ್ನು ಲೆಕ್ಕಿಸದೆ ರಾಜನಾರಾಯಣ್ ಮಾತನಾಡುತ್ತಲೇ ಇದ್ದುದರಿಂದ ಸಭಾಪತಿ ಜಿ.ಎಸ್.ಪಾಠಕ್, ಅವರನ್ನು ಹೊರಕ್ಕೆ ಒಯ್ಯುವಂತೆ ಮಾರ್ಷಲ್ಗೆ ಆಜ್ಞಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.