ಸಂವಿಧಾನ ತಿದ್ದುಪಡಿ ಅಧಿಕಾರ ಮತ್ತೆ ಸಂಸತ್ತಿಗೆ
ನವದೆಹಲಿ, ಆ. 11– ಮೂಲಭೂತ ಹಕ್ಕುಗಳೂ ಸೇರಿ ಸಂವಿಧಾನದ ಯಾವುದೇ ಭಾಗವನ್ನಾದರೂ ತಿದ್ದುಪಡಿ ಮಾಡುವುದಕ್ಕೆ ಮತ್ತೆ ಅಧಿಕಾರ ಪಡೆದುಕೊಳ್ಳುವ ಸಂವಿಧಾನದ 24ನೇ ತಿದ್ದುಪಡಿಯ ಐತಿಹಾಸಿಕ ವಿಧೇಯಕವನ್ನು ಇಂದಿನ ರಾಜ್ಯಸಭೆಯ ಒಪ್ಪಿಗೆಯೊಡನೆ ಸಂಸತ್ತು ಅಂಗೀಕರಿಸಿದಂತಾಯಿತು.
ಈಗಾಗಲೇ ಲೋಕಸಭೆ ಅಂಗೀಕರಿಸಿರುವ ಈ ವಿಧೇಯಕವನ್ನು ರಾಜ್ಯಭೆಯು ಗಟ್ಟಿಯಾದ ಕರತಾಡನಗಳ ನಡುವೆ 177–3 ಮತಗಳಿಂದ ಒಪ್ಪಿಕೊಂಡಿತು.
ಚೀನಾ ಕೇಡಿಗಿಂತ ರಷ್ಯಾ ಸಹವಾಸ ಮೇಲೆಂದ ರಾಜಾಜಿ
ಮದ್ರಾಸ್, ಆ. 11– ಚೀನಾದ ಕೇಡಿಗಿಂತಲೂ ರಷ್ಯಾ ವಿದೇಶಾಂಗ ಮಂತ್ರಿ ಗ್ರೋಮಿಕೋ ಅವರ ಸಹವಾಸ ಎಷ್ಟೋ ಮೇಲೆಂದು ಸ್ವತಂತ್ರ ಪಕ್ಷದ ನಾಯಕ ಸಿ. ರಾಜಗೋಪಾಲಾಚಾರಿ ಅವರು ತಿಳಿಸಿದ್ದಾರೆ.
ಭಾರತವನ್ನು ವಿಪತ್ತನಿಂದ ಸಂರಕ್ಷಿಸಲು ಇದಕ್ಕಿಂತ ಬೇರೇನೂ ಮಾರ್ಗಗಳಿಲ್ಲ ಎಂದು ಹೇಳಿರುವ ಶ್ರೀಯುತರು, ನಾವು ರಷ್ಯಾದ ಸಲಹೆ ಪಡೆಯಲೇಬೇಕಾಗಿರುವುದೆಂದು ಇತ್ತೀಚಿನ ‘ಸ್ವರಾಜ್ಯ’ದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.