ಬಾಂಗ್ಲಾದೇಶ: ವಿಶ್ವದ ಮನಃಸಾಕ್ಷಿಯ ಸತ್ವಪರೀಕ್ಷೆ
ನವದೆಹಲಿ, ಆಗಸ್ಟ್14– ಬಾಂಗ್ಲಾದೇಶದ ಪರಿಸ್ಥಿತಿಯು ‘ಈ ರಾಷ್ಟ್ರ ಮತ್ತು ಖಂಡದ ಮಾತ್ರವಲ್ಲದೆ ವಿಶ್ವದ ಭವಿಷ್ಯದ ಮೇಲೆಯೇ ಪರಿಣಾಮ ಬೀರಬಲ್ಲ ಇಡೀ ಮಾನವ ಸಮುದಾಯದ ಮನಃಸಾಕ್ಷಿಯ ಸತ್ವ ಪರೀಕ್ಷೆ’ ವಿಷಯವೆಂದು ರಾಷ್ಟ್ರಪತಿ ವಿ.ವಿ.ಗಿರಿ ಅವರು ವರ್ಣಿಸಿದ್ದಾರೆ.
ಈ ಸಮಸ್ಯೆ ಕುರಿತು ವ್ಯವಹರಿಸುವಾಗ ‘ನಾವು ಸದ್ಯದ ಪ್ರೇರೇಪಣೆಗಳನ್ನು ದೂರದೃಷ್ಟಿಯೊಂದಿಗೆ ಮಿಳಿತಗೊಳಿಸಬೇಕು’ ಎಂದು ಹೇಳಿದರು.
24ನೇ ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಾದ ಇಂದು ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಚ್ಚರಿಕೆ: ‘ಕಷ್ಟದ ಕಾಲ’ ಮುಂದಿದೆಯೆಂದು ಎಚ್ಚರಿಸಿದ ಗಿರಿ ಅವರು, ‘ನಯವಾದ ದಿನಗಳು ಕಳೆದು ಹೋದವು. ನಾವಿನ್ನು ವಿದೇಶೀ ನೆರವನ್ನು ಆಸರೆಯಾಗಿ ಹೊಂದಿರಲಾಗದು. ಕಷ್ಟಪಟ್ಟು ಕೆಲಸ ಮಾಡಿ ಸರಳ ಜೀವನ ನಡೆಸುವ ಸಂಕಲ್ಪ ಮಾಡಿ’ ಎಂದು ಜನತೆಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.