ADVERTISEMENT

50 ವರ್ಷಗಳ ಹಿಂದೆ: ಭಾನುವಾರ 24.10.1971

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 19:30 IST
Last Updated 23 ಅಕ್ಟೋಬರ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಐಕಮತ್ಯದಿಂದಿರಲು ಜನತೆಗೆ ಪ್ರಧಾನ ಮಂತ್ರಿ ಕರೆ

ನವದೆಹಲಿ, ಅ. 23– ಜನತೆ ತಮ್ಮ ಪಕ್ಷಗಳ ಮತ್ತು ಧರ್ಮಗಳ ಭಿನ್ನಾಭಿಪ್ರಾಯಗಳನ್ನೂ ಮರೆತು, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಏಕತೆಯನ್ನು ಸಂರಕ್ಷಿ ಸಲು ಸಂಘಟಿತರಾಗಿರಬೇಕು ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಕರೆ ನೀಡಿದರು.

ಮೂರು ವಾರಗಳ ವಿದೇಶ ಪ್ರವಾಸ ಹೊರಡುವ ಮುನ್ನ ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಅವರು, ‘ರಾಷ್ಟ್ರವು ಈಗ ಅಪಾಯ ಪರಿಸ್ಥಿತಿಯನ್ನೆದುರಿಸುತ್ತಿರುವುದರಿಂದ ನಮ್ಮ ರಕ್ಷಣಾ ಪಡೆಗಳು ಮಾತ್ರವೇ ಅಲ್ಲದೆ ಜನತೆಯೂ ಜಾಗೃತರಾಗಿರುವುದು ಅತ್ಯಗತ್ಯ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.