ಇತರ ರಾಜ್ಯಗಳಿಗೆ ನಿರಾಶ್ರಿತರ ರವಾನೆ: ನಿರ್ಧಾರ ಅನಿವಾರ್ಯ
ನವದೆಹಲಿ, ಜೂನ್ 12– ಸದ್ಯದ ಪರಿಸ್ಥಿತಿಯಲ್ಲಿ ತ್ರಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಂದ ಸುಮಾರು 25 ಲಕ್ಷ ಮಂದಿ ನಿರಾಶ್ರಿತರನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವ ಕೇಂದ್ರದ ನಿರ್ಧಾರ ಅನಿವಾರ್ಯವಾಗಿದೆ.
ಪಶ್ಚಿಮ ಬಂಗಾಳಕ್ಕೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಈಗಾಗಲೇ 40 ಲಕ್ಷವನ್ನು ಮೀರಿದ್ದು, ಇವರಿಗೆ ಪರಿಹಾರ ಒದಗಿಸುವ ಕಾರ್ಯ ರಾಜ್ಯ ಸರ್ಕಾರಕ್ಕೆ ಕಷ್ಟ ಸಾಧ್ಯವಾಗಿದೆ. ಅಂತೆಯೇ ಈಗಾಗಲೇ 15 ಲಕ್ಷ ಜನಸಂಖ್ಯೆ ಇರುವ ತ್ರಿಪುರಾದಲ್ಲಿ ಇನ್ನೂ ಹತ್ತು ಲಕ್ಷ ಮಂದಿ ನಿರಾಶ್ರಿತರಿಗೆ ಸ್ಥಳಾವಕಾಶ ಒದಗಿಸುವ ಅಸಾಧ್ಯದ ಮಾತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.