ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಬುಧವಾರ, 23–9–1970

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 21:56 IST
Last Updated 22 ಸೆಪ್ಟೆಂಬರ್ 2020, 21:56 IST
   

ಜಂಬೂ ಸವಾರಿಗೆ ಬದಲು ಬೇರೆ ವ್ಯವಸ್ಥೆ: ಪರಿಶೀಲನೆಗೆ ಸಭೆ
ಮೈಸೂರು, ಸೆ. 22–
ಜಂಬೂ ಸವಾರಿಗೆ ಬದಲು ಭುವನೇಶ್ವರಿ ಮೆರವಣಿಗೆ ಮತ್ತು ಬನ್ನಿಮಂಟಪದ ಬದಲು ಪ್ರಭುತ್ವ ಭವನದ ಬಳಿ ಪಂಜಿನ ಪ್ರದರ್ಶನವನ್ನು ಈ ವರ್ಷವೇ ನಡೆಸಲು ಸಾಧ್ಯವೇ ಎಂಬ ಬಗ್ಗೆ ಉನ್ನತ ಅಧಿಕಾರಿಗಳು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.

ಈ ವರ್ಷ ಇವುಗಳನ್ನು ನಡೆಸಲು ಸಾಕಷ್ಟು ಕಾಲಾವಕಾಶವಿಲ್ಲವೆಂದು ರಾಜ್ಯ ಮಂತ್ರಿಮಂಡಲ ಅಭಿಪ್ರಾಯಪಟ್ಟಿದೆಯಾದರೂ ಸಾಂಪ್ರದಾಯಿಕವಾಗಿ ನಡೆದುಬಂದಿರುವ ದಸರಾ ವೈಭವ ಕುಂದದಂತೆ ಏನಾದರೂ ಮಾಡಿ, ಈ ವರ್ಷದಿಂದಲೇ ಉತ್ಸವ ನಡೆಸಿಕೊಂಡು ಹೋಗಬೇಕೆಂದು ಆಶಿಸಿದೆ.

ಮುಖ್ಯಮಂತ್ರಿ ನಾಯಕತ್ವದಲ್ಲಿ ದೆಹಲಿಗೆ ಇಷ್ಟರಲ್ಲೇ ಸರ್ವಪಕ್ಷ ನಿಯೋಗ
ಬೆಂಗಳೂರು, ಸೆ. 22–
ಅವಸರವಾಗಿ ಹಾಗೂ ಒತ್ತಾಯಕ್ಕೆ ಮಣಿದು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಬರುವುದನ್ನು ತಪ್ಪಿಸುವ ಪ್ರಯತ್ನ ಮಾಡಲು ಸದ್ಯದಲ್ಲೇ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಸರ್ವಪಕ್ಷಗಳ ನಿಯೋಗವೊಂದು ದೆಹಲಿಗೆ ಹೋಗುವ ಸಂಭವವಿದೆ.

ADVERTISEMENT

ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಇಂದು ಬೆಳಿಗ್ಗೆ ವಿರೋಧ ಪಕ್ಷಗಳ ನಾಯಕರೊಡನೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.