ಢಾಕಾ ಮತ್ತೆ ಪೂರ್ವ ಸ್ಥಿತಿಗೆ
ಢಾಕಾ, ಡಿ. 26– ವಿಮೋಚನೆಯ ಹತ್ತು ದಿನಗಳ ನಂತರ, ಬಾಂಗ್ಲಾದೇಶದ ಸರ್ಕಾರವನ್ನು ಢಾಕಾಕ್ಕೆ ಬದಲಾಯಿಸಿದ ನಾಲ್ಕು ದಿನಗಳ ನಂತರ ನಗರದ ಜನಜೀವನ ಯಥಾಪೂರ್ವಸ್ಥಿತಿಗೆ ಹಿಂತಿರುಗುತ್ತಿದೆ. ಪುನರ್ ನಿರ್ಮಾಣದ ಹೊಸ ಯತ್ನಗಳಿಗೆ ಜನ ಮತ್ತು ಸರ್ಕಾರ ಗಮನ ಕೊಡುತ್ತಿವೆ.
ಕಾನೂನು ಮತ್ತು ವ್ಯವಸ್ಥೆ, ಆಡಳಿತ ವ್ಯವಸ್ಥೆಗಳ ಪುನರ್ಸ್ಥಾಪನೆ, ರಾಷ್ಟ್ರದ ಪುನರ್ನಿರ್ಮಾಣ, ಭಾರತದಿಂದ ನಿರಾಶ್ರಿತ ರನ್ನು ವಾಪಸ್ ಕರೆಸಿಕೊಳ್ಳುವುದು, ಅವರು ಗೌರವಯುತವಾಗಿ ಜೀವನ ನಡೆಸುವಂತೆ ವ್ಯವಸ್ಥೆ ಮಾಡುವುದು ಇವುಗಳಿಗೆ ಆದ್ಯತೆ ಕೊಡುವುದಾಗಿ ಬಾಂಗ್ಲಾದ ಮುಖ್ಯಸ್ಥ ತಾಜುದ್ದೀನ್ ಅಹ್ಮದ್ ತಿಳಿಸಿದ್ದಾರೆ.
ಚೀನೀ ಸತ್ಕಾರದಿಂದ ಭಾರತದ ರಾಯಭಾರಿ ಸಭಾತ್ಯಾಗ
ಪೀಕಿಂಗ್, ಡಿ. 26– ಚೀನಾದ ಉಪ ಪ್ರಧಾನಿ ಲೀ ಸೇನ್– ಎನ್ರವರು ಭಾರತದ ವಿರುದ್ಧ ಉಗ್ರ ಟೀಕೆಗಳನ್ನು ಮಾಡಿದಾಗ, ಭಾರತದ ರಾಯಭಾರಿ ಪ್ರತಿನಿಧಿ ಬ್ರಿಜೇಶ್ ಮಿಶ್ರಾ ಮತ್ತು ಅವರ ಪತ್ನಿ ಇಂದು ಇಲ್ಲಿನ ಸತ್ಕಾರಕೂಟದಿಂದ ಹೊರಬಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.