ಬೆಂಗಳೂರು, ಏ. 2– ನೂರಾರು ಕೋಟಿ ರೂಪಾಯಿಗಳ ಸರ್ಕಾರಿ ಹಣದ, ನೀರಾವರಿ ಯೋಜನೆಗಳ ಫಲ ಪಡೆದುಶ್ರೀಮಂತವಾಗಿರುವ ಕೃಷಿ ಜಮೀನಿನ ಮೇಲೆ ‘ಎಕರೆಗೆ ಒಂದು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ’ ಅಭಿವೃದ್ಧಿ ತೆರಿಗೆಯನ್ನು ವಿಧಿಸಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ವಿಧೇಯಕವೊಂದನ್ನು ವಿಧಾನಸಭೆಯ ಈ ಅಧಿವೇಶನದಲ್ಲಿಯೇ ತಾವು ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಸದನದಲ್ಲಿ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.