ADVERTISEMENT

50 ವರ್ಷಗಳ ಹಿಂದೆ: ಸೋಮವಾರ 8–3–1971

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST
   

ಲೋಕಸಭೆ ಚುನಾವಣೆ ಶಾಂತಿಯುತ
ಬೆಂಗಳೂರು, ಮಾರ್ಚ್‌ 7–
ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಇಂದು ಶಾಂತ ರೀತಿಯಿಂದ ಮುಗಿಯಿತು. ಒಟ್ಟು 27 ಲೋಕಸಭಾ ಕ್ಷೇತ್ರಗಳಲ್ಲೂ ಮಧ್ಯಂತರ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುವ ತವಕದ ವಾತಾವರಣ ಆವರಿಸಿದೆ.

ವಿದ್ಯಾವಂತರ ವಿಶೇಷ ಆಸ್ಥೆ
ಬೆಂಗಳೂರು, ಮಾರ್ಚ್ 7–
ಕೇಂದ್ರದ ಸಚಿವ ಶ್ರೀ ಕೆ.ಹನುಮಂತಯ್ಯ ಹಾಗೂ ಪ್ರೊ. ಗೋಪಾಲಕೃಷ್ಣ ಅಡಿಗರಲ್ಲಿ ಬೆಂಗಳೂರು ಕ್ಷೇತ್ರದ ಮತದಾರರು ಯಾರನ್ನು ಆರಿಸಿದ್ದಾರೆ ಎಂದು ಹೇಳುವುದು ಕಷ್ಟವಾಗಿದೆ.

ವಿದ್ಯಾವಂತ ಮತದಾರರಲ್ಲಿ ಬಹು ಮಂದಿ ಇಂದು ಮತಗಟ್ಟೆಗೆ ಬಂದ ಕಾರಣ ‘ನಮ್ಮ ಅಭ್ಯರ್ಥಿ ಅಡಿಗರು ಗೆಲ್ಲುವರು’ ಎಂಬ ಆಶಯ ಜನಸಂಘಕ್ಕೆ ಮೂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.