ADVERTISEMENT

50 ವರ್ಷಗಳ ಹಿಂದೆ: ಶನಿವಾರ 10.4.1971

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:31 IST
Last Updated 9 ಏಪ್ರಿಲ್ 2021, 19:31 IST
   

ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ಇಲ್ಲ
ದೆಹಲಿ, ಏ. 9–
ಮೈಸೂರು ರಾಜ್ಯದಲ್ಲಿ ಸರ್ಕಾರ ರಚನೆಗೆ ಯಾವ ಯತ್ನವನ್ನೂ ನಡೆಸಬಾರದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಡಿ.ಸಂಜೀವಯ್ಯನವರು ಇಂದು ರಾಜ್ಯ ಶಾಖೆಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಸರ್ಕಾರ ರಚಿಸಲು ಹೈಕಮಾಂಡ್ ವಿರೋಧಕ್ಕೆ ಕಾರಣಗಳೇ ನೆಂಬುದನ್ನು ಶ್ರೀ ಉಮಾಶಂಕರ್ ದೀಕ್ಷಿತ್‌ರವರು ಶ್ರೀ ದೇವರಾಜ ಅರಸ್ ಮತ್ತು ಶ್ರೀ ಎಚ್. ಸಿದ್ಧವೀರಪ್ಪನವರಿಗೆ ತಿಳಿಸಿದ್ದರು. ರಾಜ್ಯದಲ್ಲಿ ಮಂತ್ರಿಮಂಡಲ ರಚನೆಗೆ ಪಕ್ಷದಲ್ಲಿ ಸರ್ವಾನುಮತವಿಲ್ಲ ಎಂದು ಹೈಕಮಾಂಡ್ ಭಾವಿಸಿದೆಯೆಂದು ವರದಿಯಾಗಿದೆ.

ಬಾಂಗ್ಲಾದೇಶದ ಅರ್ಧ ಭಾಗ ವಿಮುಕ್ತಿ
ಋಷ್ತಿಯಾ, ಏ. 9–
ದೇಶಪ್ರೇಮ ಮತ್ತು ಉತ್ಸಾಹಗಳೇ ಪ್ರಮುಖ ಆಯುಧಗಳಾಗಿ, ಎರಡು ವಾರಗಳ ಹಿಂದೆ ಸ್ವಾತಂತ್ರ್ಯ ಸಮರವನ್ನಾರಂಭಿಸಿದ ಪೂರ್ವ ಬಂಗಾಳದ ಜನರು ಇಂದು ತಮ್ಮ ಪ್ರಾಂತ್ಯದ ಅರ್ಧಭಾಗವನ್ನು ವಶಪಡಿಸಿಕೊಂಡಿರುವಂತೆ ಕಂಡುಬರುತ್ತಿದೆ.

ADVERTISEMENT

ಕನಿಷ್ಠ ಪಕ್ಷ ಅಲ್ಲಿಯ ಎರಡೂವರೆ ಕೋಟಿ ಜನರ (ಮೂರನೇ ಒಂದು ಭಾಗದಷ್ಟು) ಮಟ್ಟಿಗಾದರೂ ಸ್ವತಂತ್ರ ಬಾಂಗ್ಲಾದೇಶದ ಕನಸು ನನಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.