ADVERTISEMENT

ಭಾನುವಾರ, 11–2–1968

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST

ಸೋಮವಾರ ನಗರದ ಕಾಲೇಜುಗಳ ಪುನರಾರಂಭ

ಬೆಂಗಳೂರು, ಫೆ. 10– ವಿದ್ಯಾರ್ಥಿಗಳ ಹಿಂದಿ ವಿರುದ್ಧ ಚಳವಳಿಯ ಕಾರಣ ಅನಿರ್ದಿಷ್ಟ ಕಾಲದವರೆಗೆ ಮುಚ್ಚಲಾಗಿದ್ದ ಬೆಂಗಳೂರು ನಗರದ ಕಾಲೇಜುಗಳು ಫೆಬ್ರವರಿ 12 ರಂದು,  ಸೋಮವಾರ ಪುನಃ ಆರಂಭವಾಗಲಿವೆ.

**

ADVERTISEMENT

ದೇವರಾಣೆ

ಬೆಂಗಳೂರು, ಫೆ. 10– ‘ನಾವು ಗುರು–ಶಿಷ್ಯರು. ದೇವರಾಣೆ! ಹಾಗೆಯೇ ನಡೆದು ಕೊಳ್ಳೋಣ’

ನಗರದ ಕಾಲೇಜುಗಳನ್ನು ಪುನರಾರಂಭಿಸುವ ತೀರ್ಮಾನದ ಪ್ರಕಟಣೆಯಲ್ಲಿ ಉಪ ಕುಲಪತಿ ಶ್ರೀ ವಿ.ಕೆ. ಗೋಕಾಕ್ ಈ ಮನವಿಯನ್ನು ಮಾಡಿದ್ದಾರೆ.

**

ಕೇಂದ್ರ ಹುದ್ದೆಗಳಲ್ಲಿ ಕೋಟಾ ಪದ್ಧತಿಗೆ ರಾಜ್ಯದ ಕೋರಿಕೆ

ಬೆಂಗಳೂರು, ಫೆ. 10– ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ, ರಾಜ್ಯಗಳಿಗೆ ಕೋಟಾ ಪದ್ಧತಿಯಲ್ಲಿ ಅವಕಾಶಗಳನ್ನು ಕಾದಿರಿಸುವ ಸೂಚನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ನೀಡಿದೆ ಎಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯ ಅವರು ಇಂದು ಹೇಳಿದರು.

‘ಪ್ರಾಂತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂಬ ಸೂಚನೆಯನ್ನು ಅದರೊಂದಿಗೆ ನೀಡಲಾಗಿದೆ’ ಎಂದು ತಿಳಿಸಿದರು.

**

ನಗರದಲ್ಲಿ ಮುದ್ರಣ ಯಂತ್ರಗಳ ತಯಾರಿಕೆ: ಪ. ಜರ್ಮನಿ ಸಹಕಾರ

ಬೆಂಗಳೂರು, ಫ. 10– ಪಶ್ಚಿಮ ಜರ್ಮನಿಯ ಕಂಪೆನಿಯೊಂದರ ಸಹಕಾರದಿಂದ ನಗರದಲ್ಲಿ ಮುದ್ರಣ ಯಂತ್ರೋಪಕರಣಗಳನ್ನು ಉತ್ಪಾದಿಸುವ ಬೃಹತ್ ಕಾರ್ಖಾನೆಯೊಂದು ನಿರ‍್ಮಾಣವಾಗಲಿದೆ.

ಈ ಕುರಿತು ನಗರದ ಎಚ್.ಎಂ.ಟಿ. ಮತ್ತು ಪಶ್ಚಿಮ ಜರ್ಮನಿಯ ಮೆಸರ್ಸ್ ಆಲ್ಬರ್ಟ್ ಫ್ರ್ಯಾಂಕ್‌ಂಥಾಲ್ ನಡುವೆ ನಡೆದ ಒಡಂಬಡಿಕೆಯ ಮಾತುಕತೆಗಳು ಅಂತಿಮ ಘಟ್ಟಕ್ಕೆ ತಲುಪಿವೆ ಎಂದು ತಿಳಿದುಬಂದಿದೆ.

**

ಅಮೃತಬಜಾರ್ ಪತ್ರಿಕೆ ಶತಮಾನೋತ್ಸವ: ವಿಶೇಷ ಸ್ಟಾಂಪ್ ಬಿಡುಗಡೆ

ನವದೆಹಲಿ, ಫೆ. 10– ಕಲ್ಕತ್ತದಿಂದ ಪ್ರಕಟವಾಗುತ್ತಿರುವ ಅಮೃತ ಬಜಾರ್ ಪತ್ರಿಕೆಯ ಶತಮಾನೋತ್ಸವ ಸಂದರ್ಭದಲ್ಲಿ ಅಂಚೆ ಮತ್ತು ತಂತಿ ಇಲಾಖೆಯು ಫೆಬ್ರವರಿ 20 ರಂದು 15 ಪೈಸೆಯ ವಿಶೇಷ ಅಂಚೆ ಚೀಟಿಯನ್ನು ಮಾರಾಟಕ್ಕೆ ಬಿಡುಗಡೆ ಮಾಡಲಿದೆ. ಅಂಚೆ ಚೀಟಿಯ 20 ಲಕ್ಷ ಪ್ರತಿಗಳನ್ನು ಮುದ್ರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.