75 ವರ್ಷಗಳ ಹಿಂದೆ
ನಿರಾಶ್ರಿತರ ಕೆಚ್ಚು
ಅಹ್ಮದಾಬಾದ್, ಆಗಸ್ಟ್ 20– ನಿರಾಶ್ರಿತರ ಗುಂಪೊಂದು ಅಹ್ಮದಾಬಾದ್ ಹೊರವಲಯದಲ್ಲಿರುವ ನಿರಾಶ್ರಿತರ ನಗರ–ಕುಟೀರ ನಗರದ ಬಳಿ ಓಡುತ್ತಿದ್ದ ರೈಲೊಂದನ್ನು ಅಪಾಯದ ಸರಪಳಿ ಎಳೆದು ನಿಲ್ಲಿಸಿ, ಅದರಲ್ಲಿದ್ದ ಇಬ್ಬರು ನಿರಾಶ್ರಿತ ಬಂದಿಗಳೊಡನೆ ಪರಾರಿಯಾಗಿದೆ.
ಈ ಇಬ್ಬರು ಬಂದಿಗಳನ್ನು 211 ಮಣ ತೂಗುವಳಿ ಮೂಟೆ ಸಕ್ಕರೆ ಸಾಗಿಸಿದ ಆಪಾದನೆ ಮೇಲೆ ಬಂಧಿಸಿ ಕೋಳ ಹಾಕಿ ಕರೆದೊಯ್ಯಲಾಗುತ್ತಿತ್ತು. ಬಂದಿಗಳ ಜೊತೆಯಿದ್ದ ಇಬ್ಬರು ಪೊಲೀಸರಿಗೂ ಹೊಡೆದಿದ್ದಾರೆಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.