ನವದೆಹಲಿ, ಸೆಪ್ಟೆಂಬರ್ 25– ದಕ್ಷಿಣ ಭಾರತ ರಾಜ್ಯಗಳಲ್ಲಿ ಭತ್ತದ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಶೀಘ್ರವೇ ಆರ್ಥಿಕ ಮಂಡಳಿ ರಚಿಸಲಿದೆ.
ಮೈಸೂರು, ಮದರಾಸ್, ತಿರುವಾಂಕೂರು–ಕೊಚ್ಚಿನ್ ಯೂನಿಯನ್ ಮತ್ತು ಹೈದರಾಬಾದ್ ಈ ಮಂಡಳಿಯ ವ್ಯಾಪ್ತಿಗೆ ಒಳಪಡಿಸಲಿವೆ. ಮಂಡಳಿಯ ಕಾರ್ಯ ಚಟುವಟಿಕೆ ಕುರಿತ ರೂಪರೇಷೆಗಳನ್ನು ಅಂತಿಮಗೊಳಿಸಲಾಗಿದೆ.
ಕೇಂದ್ರ ಆಹಾರ ಸಚಿವ ಕೆ.ಎಂ. ಮುನ್ಷಿ ಅವರು, ಈ ಮಂಡಳಿಯ ಅಧ್ಯಕ್ಷರಾಗಲಿದ್ದು, ನಾಲ್ಕು ರಾಜ್ಯಗಳ ಆಹಾರ ಸಚಿವರು ಸದಸ್ಯರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.