ADVERTISEMENT

25 ವರ್ಷಗಳ ಹಿಂದೆ: ಎಮ್ಮೆ ಮೇಯಿಸಲು ಹೋದ ಮೂವರು ಮಕ್ಕಳ ಜಲಸಮಾಧಿ

ಪ್ರಜಾವಾಣಿ ವಿಶೇಷ
Published 6 ಅಕ್ಟೋಬರ್ 2025, 23:50 IST
Last Updated 6 ಅಕ್ಟೋಬರ್ 2025, 23:50 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಎಮ್ಮೆ ಮೇಯಿಸಲು ಹೋದ ಮೂವರು ಮಕ್ಕಳ ಜಲಸಮಾಧಿ

ಶಿರಾ, ಅ. 6- ಎಮ್ಮೆಗಳನ್ನು ಮೇಯಿಸಲು ಹೋದ ಮೂವರು ಮಕ್ಕಳು ಜಲಸಮಾಧಿ ಆಗಿರುವ ದಾರುಣ ಘಟನೆ ಬುಕ್ಕಾಪಟ್ಣ ಹೋಬಳಿಯ ಬಾಳಾಪುರ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.

ಮಕ್ಕಳು ಬಾಳಾಪುರ ಕೆರೆಯಲ್ಲಿ ಎಮ್ಮೆಗಳಿಗೆ ನೀರು ಕುಡಿಸಲು ಹೋದರು. ಎಮ್ಮೆಗಳು ನೀರಿನಲ್ಲಿ ಎಳೆದುಕೊಂಡು ಹೋಗಿದ್ದರಿಂದ ಮುಳುಗಿ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಕ್ಷ್ಮಮ್ಮ (14), ನಾಗರಾಜು (12) ಮತ್ತು ದೊಡ್ಡಯ್ಯ (12) ಮೃತರು.

ವಿದ್ಯುತ್ ಕ್ಷೇತ್ರ ಪುನರ್‌ ರಚನೆ: ರಾಜ್ಯ ಯೋಜನೆಗೆ ಕೇಂದ್ರ ಅಸ್ತು

ನವದೆಹಲಿ, ಅ. 6– ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರಲಿರುವ ವಿಶ್ವಬ್ಯಾಂಕ್‌ ನೆರವಿನ ಸುಮಾರು ಆರು ಸಾವಿರ ಕೋಟಿ ರೂ. ಅಂದಾಜು ವೆಚ್ಚದ ವಿದ್ಯುತ್‌ ಪುನರ್‌ ರಚನೆ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.