
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ರಾಜಾ ತ್ರಿಭುವನ್ರಿಗೆ ಮತ್ತೆ ಸಿಂಹಾಸನ
ನವದೆಹಲಿ, ಜ.3– ರಾಜಾ ತ್ರಿಭುವನ್ರವರು ಪುನಶ್ಚ ನೇಪಾಳ ಸಿಂಹಾಸನವನ್ನು ಏರಲು ಸಧ್ಯದಲ್ಲೇ ಸೇರಲಿರುವ ನೇಪಾಳ ಪಾರ್ಲಿಮೆಂಟು ಸಮ್ಮತಿಸುವುದೆಂಬ ನಂಬುಗೆಯನ್ನು ನವದೆಹಲಿಯಲ್ಲಿರುವ ಅಧಿಕೃತ ನೇಪಾಳೀ ವೃತ್ತಗಳು ವ್ಯಕ್ತಪಡಿಸಿವೆ.
ಕಳೆದ ನವೆಂಬರ್ 2ನೇ ತಾರೀಖು ರಾಜಾ ತ್ರಿಭುವನ್ರವರನ್ನು ಸಿಂಹಾಸನದಿಂದ ಕಿತ್ತುಹಾಕಿ, ರಾಜಕುಮಾರ ಗ್ಯಾನೇಂದ್ರರನ್ನು ಗಾದಿಯ ಮೇಲೆ ಕೂರಿಸಬೇಕೆಂದು ಮತವಿತ್ತ ಪಾರ್ಲಿಮೆಂಟ್ ಒಪ್ಪುವುದಾದರೆ ರಾಜ ಸಿಂಹಾಸನದ ಮೇಲೆ ಪುನಾರಾರೋಹಣ ಮಾಡುವ ತತ್ವವನ್ನು ಅಂಗೀಕರಿಸಲು ನೇಪಾಳ ಸರಕಾರ ಒಪ್ಪಿರುವುದೆಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.