ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 21–7–1970

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 19:30 IST
Last Updated 20 ಜುಲೈ 2020, 19:30 IST

ಗಡಿ ಪ್ರಶ್ನೆ: ಪ್ರಧಾನಿಯಿಂದ ಹೊಸ ಹೇಳಿಕೆ ಬರದಿರುವುದಕ್ಕೆ ರಾಜ್ಯದ ಜನತೆಗೆ ನಿರಾಶೆ

ಬೆಂಗಳೂರು, ಜುಲೈ 20– ರಾಜ್ಯದಲ್ಲಿ ತಮ್ಮ ಪ್ರವಾಸ ಕಾಲದಲ್ಲಿ ಮೈಸೂರು ರಾಜ್ಯದ ಗಡಿ ಸಮಸ್ಯೆಯ ಬಗ್ಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ‘ಹೊಸ ಹೇಳಿಕೆಯನ್ನೇನೂ ನೀಡದಿರುವುದರಿಂದ’ ಮೈಸೂರು ಜನತೆಗೆ ನಿರಾಶೆಯಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.

‘ಮಹಾಜನ್‌ ವರದಿಯನ್ನು ಒಪ್ಪಲು ಮಹಾರಾಷ್ಟ್ರವು ನಿರಾಕರಿಸಿದ ಮೇಲೆ ಹೇಳಲಾಗುತ್ತಿರುವ ಹೇಳಿಕೆಯನ್ನೇ ಪ್ರಧಾನಿಯವರು ಪುನರುಚ್ಚರಿಸಿರುವರೇ ಹೊರತು ಹೊಸದೇನನ್ನೂ ಹೇಳಲಿಲ್ಲ’ ಎಂದು ವರದಿಗಾರರೊಡನೆ ಮಾತನಾಡುತ್ತಾ ಶ್ರೀ ಪಾಟೀಲರು ತಿಳಿಸಿದರು.

ADVERTISEMENT

ಮಳೆಯಲ್ಲಿ ಮುಕ್ತಾಯ

ಬೆಂಗಳೂರು, ಜುಲೈ 20– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಮೂರು ದಿವಸಗಳ ರಾಜ್ಯ ಪ್ರವಾಸದ ಕೊನೆಯ ಕಾರ್ಯಕ್ರಮವಾದ ಕಂಠೀರವ ಸ್ಟೇಡಿಯಂನ ಬಹಿರಂಗ ಸಭೆಯು ಇಂದು ಸಂಜೆ ಮಳೆಯಲ್ಲಿ ತೊಯ್ದು ಬರೇ ಐದು ನಿಮಿಷಗಳಲ್ಲಿ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.