ಬಂಗಾರಪ್ಪ ಪರ 10 ಶಾಸಕರ ಸಸ್ಪೆಂಡ್
ಬೆಂಗಳೂರು, ಏ. 8– ದಾವಣಗೆರೆಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಭಾಗವಹಿಸಿದ್ದ 10 ಮಂದಿ ಶಾಸಕರನ್ನು ಪ್ರದೇಶ ಕಾಂಗೈ ಸಮಿತಿಯು ಪಕ್ಷದಿಂದ ಅಮಾನತುಗೊಳಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಎಂ.ವಿ. ರಾಜಶೇಖರನ್ ತಿಳಿಸಿದ್ದಾರೆ.
ಶಾಸಕರುಗಳಾದ ಮಲ್ಲಾರಿಗೌಡ ಪಾಟೀಲ್, ಕೆ.ಜೆ. ಜಾರ್ಜ್, ನಸೀರ್ ಅಹಮದ್, ಎಂ. ರಾಮಪ್ಪ, ಈಟಿ ಶಂಭುನಾಥ್, ಆರ್.ವಿ. ದೇವರಾಜ್, ಮಾಲೀಕಯ್ಯ ಗುತ್ತೇದಾರ್, ಕೆ.ಎಚ್. ಗೌಡ, ರವೀಂದ್ರನಾಥ ಬಾಬು ಮತ್ತು ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಮಟ್ಟಿ ಇವರನ್ನು ವಿ. ಕೃಷ್ಣರಾವ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯು ಪಕ್ಷದಿಂದ ಅಮಾನತುಗೊಳಿಸಲು ನಿರ್ಣಯಿಸಿತು.
ಠಾಕ್ರೆ ಖುಲಾಸೆ
ಲಖನೌ, ಏ. 8 (ಪಿಟಿಐ)– ಅಯೋಧ್ಯೆಯಲ್ಲಿ ವಿವಾದಾತ್ಮಕ ಕಟ್ಟಡವನ್ನು ಉರುಳಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಆರೋಪಿ ಶಿವಸೇನೆಯ ಬಾಳ ಠಾಕ್ರೆಯನ್ನು ಇಂದು ಬಿಡುಗಡೆ ಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.