ನೀರಿನ ಅಭಾವವೇ ಕಾವೇರಿ ಪರಿಹಾರಕ್ಕೆ ಅಡ್ಡಿ
ನವದೆಹಲಿ, ಏ. 29– ಕಾವೇರಿ ಕಣಿವೆ ಪ್ರದೇಶವು ಈಗ ಜಲಸಂಪನ್ಮೂಲದ ಕೊರತೆ ಎದುರಿಸುತ್ತಿದ್ದು, ಅದಕ್ಕೆ ಬೇರೆ ನದಿಗಳ ಸಂಪರ್ಕ ಕಲ್ಪಿಸಿ ಜಲ ಸಂಪತ್ತನ್ನು ಹೆಚ್ಚಿಸದ ಹೊರತು ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವಾಗಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ವಿದ್ಯಾಚರಣ್ ಶುಕ್ಲಾ ಇಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು.
ಮತಾಂತರಗೊಂಡವರಿಗೆ ಮೀಸಲು ಸಲ್ಲದು
ಬೆಂಗಳೂರು, ಏ. 29– ಹಿಂದೂ ಧರ್ಮದಿಂದ ಮತಾಂತರಗೊಂಡ ದಲಿತರಿಗೆ ಯಾವ ಕಾರಣಕ್ಕೂಮೀಸಲಾತಿ ನೀಡಬಾರದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಹಿರಿಯ ಬಿಜೆಪಿ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಇಂದು ಇಲ್ಲಿಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.