ADVERTISEMENT

ಪ್ರಜಾವಾಣಿ 25 ವರ್ಷದ ಹಿಂದೆ| ಬುಧವಾರ 25 ಮಾರ್ಚ್‌ 1998

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 19:30 IST
Last Updated 24 ಮಾರ್ಚ್ 2023, 19:30 IST
   

ತೆಲುಗುದೇಶಂನ ಬಾಲಯೋಗಿ ಲೋಕಸಭಾಧ್ಯಕ್ಷರಾಗಿ ಆಯ್ಕೆ

ನವದೆಹಲಿ, ಮಾರ್ಚ್‌ 24– ಆಳುವ ಬಿಜೆಪಿ ಬೆಂಬಲಿಸಿದ ತೆಲುಗು ದೇಶಂನ ಜಿ.ಎಂ.ಸಿ ಬಾಲಯೋಗಿ ಅವರು 12ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಇಂದು ಆಯ್ಕೆಗೊಂಡರು. ಇದರಿಂದಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವು ಶುಕ್ರವಾರ ವಿಶ್ವಾಸ ಮತದಲ್ಲಿ ಪಾರಾಗುವುದು
ಖಚಿತವಾದಂತಾಯಿತು.

ಬಿರುಗಾಳಿ 105 ಬಲಿ 500 ಕಣ್ಮರೆ

ADVERTISEMENT

ಮಿಡ್ನಾಪುರ, ಮಾರ್ಚ್‌ 24– ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದ ಗಡಿ ಪ್ರದೇಶವಾದ ಡಾಂಟನ್‌ ಮತ್ತು ಜಲ್ಷೇವಾರ್ ಪ್ರದೇಶಗಳಲ್ಲಿ ಭಾರಿ ಬಿರುಗಾಳಿಯಿಂದ 105 ಜನರು ಸತ್ತು 500 ಮಂದಿ ನಾಪತ್ತೆಯಾಗಿದ್ದಾರೆ. 1100 ಜನ ತೀವ್ರ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.