ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 8–7–1972

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 19:30 IST
Last Updated 7 ಜುಲೈ 2022, 19:30 IST
   

l ಶರಾವತಿ ಹಗರಣ – ಸತ್ಯ ಹೊರತರಲು ಸಕಾಲದಲ್ಲಿ ಸೂಕ್ತ ಕ್ರಮ: ಎಚ್‌ಎಂಸಿ

ಬೆಂಗಳೂರು, ಜುಲೈ 7 – ಶರಾವತಿ ಪ್ರಕರಣದಲ್ಲಿ ತಮ್ಮನ್ನು ತಪ್ಪಿತಸ್ಥರೆಂದು ಆಪಾದಿಸಿ ನ್ಯಾಯಾಂಗ ತನಿಖೆಗೆ ಆಗ್ರಹಪಡಿಸುತ್ತಿರುವವರಿಗೆ ವಿಧಾನಸಭೆಯಲ್ಲಿ ಇಂದು ಬಿರುಸಾಗಿ ವಾಪಸು ಕೊಟ್ಟ ಲೋಕೋಪಯೋಗಿ ಇಲಾಖೆ ಮಂತ್ರಿ ಶ್ರಿ ಎಚ್‌.ಎಂ. ಚನ್ನಬಸಪ್ಪ ಅವರು , ‘ಸತ್ಯ ಹೊರತರುವುದಕ್ಕೆ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದೇ ಸರ್‍ಕಾರದ ನಿಲುವಾಗಿದೆ’ ಎಂದು ಸ್ಪಷ್ಟಪಡಿಸಿದರು.

ತನಿಖೆಗೆ ಆಗ್ರಹವೆಬ್ಬಿಸಿರುವ ಸಂಸ್ಥಾ ಕಾಂಗ್ರೆಸ್ಸಿಗರನ್ನು ಪ್ರತ್ಯೇಕವಾಗಿ ಒಂದು ಘಟ್ಟದಲ್ಲಿ ಬೊಟ್ಟು ಮಾಡಿ ‘ಲೋಕದಲ್ಲಿ ಜನ ನಿಮ್ಮನ್ನು ನಂಬುತ್ತಾರಾ?’ ಎಂದು ಕೇಳಿದ ಶ್ರಿ ಎಚ್‌.ಎಂ.ಸಿ. ಅವರು, ‘1962 ಮತ್ತು 67ರಲ್ಲಿ ನಾನೇ ನನ್ನ ‍ವಿರುದ್ಧವೇ ವಿಚಾರಣೆ ಏರ್‍ಪಡಿಸಿ ಅಂದೆ, ಆಗ ನೀವು ಯಾಕೆ ಮಾಡಲಿಲ್ಲ? ನೀವೇ ಅಧಿಕಾರದಲ್ಲಿದ್ದಿರಿ’ ಎಂದು ಕಾಂಗ್ರೆಸ್‌ ಸದಸ್ಯರ ಕರತಾಡನಗಳ ಮಧ್ಯೆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.