ADVERTISEMENT

50 ವರ್ಷಗಳ ಹಿಂದೆ: ಪ್ರಜಾವಾಣಿ ಕಡತಗಳಿಂದ

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:55 IST
Last Updated 14 ಮೇ 2022, 20:55 IST
   

ಚಿರಶಾಂತಿಗೆ ಅಗತ್ಯವಾದ ಅಂಶ ಗಳ ಒಪ್ಪಂದಕ್ಕೆ ಇಂದಿರಾ ಕರೆ

ನ್ಯೂಯಾರ್ಕ್, ಮೇ 14– ಭಾರತ– ಪಾಕಿಸ್ತಾನಗಳ ನಡುವೆ ಮುಂಬರುವ ಶೃಂಗಸಭೆಯಲ್ಲಿ ಆಗಬಹುದಾದ ಯಾವುದೇ ಒಪ್ಪಂದದಲ್ಲಿ ಎರಡೂ ದೇಶಗಳ ನಡುವೆ ಚಿರಶಾಂತಿ ನೆಲೆಸುವ ಅಂಶಗಳನ್ನು ಅಡಕವಾಗಿರಬೇಕು ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಅಮೆರಿಕದ ಟೆಲಿವಿಷನ್ ವೀಕ್ಷಕರಿಗೆ ತಿಳಿಸಿದರು.

ಭಾರತವು ಚಿರಶಾಂತಿಗಾಗಿ ಕ್ರಮಕ್ರಮವಾಗಿ ಯತ್ನಿಸುತ್ತಿತ್ತು. ಆದರೆ, ಇದು ಫಲಪ್ರದವಾಗಿಲ್ಲ. ಪಾಕಿಸ್ತಾನದ ಸರ್ಕಾರ ಮತ್ತು ಜನತೆ ಶಾಂತಿ ಬಯಸುವುದೇ ಆದರೆ ಅದು ಖಚಿತವಾಗಿ ದೊರೆಯುತ್ತದೆ ಎಂದು ಅವರು ಘೋಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.