ADVERTISEMENT

50 ವರ್ಷಗಳ ಹಿಂದೆ: ಬಡತನ ನಿವಾರಣೆಗೆ ಸಮ್ಮಿಳಿತ ಯತ್ನಕ್ಕೆ ರಾಷ್ಟ್ರಪತಿ ಗಿರಿ ಕರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 20:59 IST
Last Updated 14 ಆಗಸ್ಟ್ 2022, 20:59 IST
   

ಬಡತನ ನಿವಾರಣೆಗಾಗಿ ಸಮ್ಮಿಳಿತ ಯತ್ನಕ್ಕೆ ರಾಷ್ಟ್ರಪತಿ ಗಿರಿ ಕರೆ

ನವದೆಹಲಿ, ಆಗಸ್ಟ್‌ 14– ಬಡತನ ಸಮಸ್ಯೆ ಎದುರಿಸುವುದರಲ್ಲಿ ಯುದ್ಧಕಾಲದ ಚಟುವಟಿಕೆಗಳಿಂದ ವಿವೇಚಿತ ಮತ್ತು ಸಂಯುಕ್ತ ಪ್ರಯತ್ನ ನಡೆಸಬೇಕೆಂದು ರಾಷ್ಟ್ರಪತಿ ವಿ.ವಿ. ಗಿರಿ ಅವರು ರಾಷ್ಟ್ರದ ಪ್ರತೀ ವ್ಯಕ್ತಿಗೂ ಕರೆ ನೀಡಿದರು.

ಇಂದು ಮಧ್ಯರಾತ್ರಿ 12 ಗಂಟೆಗೆ ಸ್ವಲ್ಪ ಮುಂಚೆ ಚರಿತ್ರಾರ್ಹ ಪಾರ್ಲಿಮೆಂಟ್‌ ಕೇಂದ್ರ ಭವನದಿಂದ ಸ್ವಾತಂತ್ರ್ಯೋತ್ಸವ ಬೆಳ್ಳಿಹಬ್ಬದ ಸಂದೇಶ ನೀಡಿದ ರಾಷ್ಟ್ರಪತಿಗಳು, ಆದಷ್ಟು ಎಚ್ಚರಿಕೆಯಿಂದಲೂ ಮತ್ತು ಆದಷ್ಟು ಸರಳ ವಿಧಾನಗಳಿಂದಲೂ ಬಡತನ ಹತ್ತಿಕ್ಕುವ ಅಗಾಧ ಹೊಣೆ ನಿರ್ವಹಿಸಬೇಕೆಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.