ADVERTISEMENT

25 ವರ್ಷಗಳ ಹಿಂದೆ: ಕಲ್ಯಾಣ್‌ ಸಿಂಗ್‌ಗೆ ಬಿಎಸ್‌ಪಿ ಬೆಂಬಲ ವಾಪಸ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 22:00 IST
Last Updated 19 ಅಕ್ಟೋಬರ್ 2022, 22:00 IST
   

ಕಲ್ಯಾಣ್‌ ಸಿಂಗ್‌ಗೆ ಬಿಎಸ್‌ಪಿ ಬೆಂಬಲ ವಾಪಸ್‌

ಲಖನೌ, ಅ. 19 (ಪಿಟಿಐ, ಯುಎನ್‌ಐ)– ಬಹುಜನ ಸಮಾಜ ಪಕ್ಷವು 29 ದಿನಗಳ ಕಲ್ಯಾಣ್‌ ಸಿಂಗ್‌ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಇಂದು ಬೆಂಬಲ ವಾಪಸ್‌ ಪಡೆಯುವ ಮೂಲಕ ಉತ್ತರಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತೆ ತಲೆದೋರಿದೆ.

ಈ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳವಾರವೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ರೊಮೇಶ್‌ ಭಂಡಾರಿ ಅವರು ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಅವರಿಗೆ ಸೂಚಿಸಿದ್ದಾರೆ.

ADVERTISEMENT

ಘರ್ಷಣೆ: 100 ತಮಿಳು ಉಗ್ರರ ಸಾವು

ಕೊಲಂಬೊ, ಅ. 19 (ಪಿಟಿಐ)– ಕಳೆದ ರಾತ್ರಿ ಮುಲ್ಲೈತೀವು ಕರಾವಳಿ ಸಮೀಪ ಐದು ಗಂಟೆಗಳ ಕಾಲ ನೌಕಾಪಡೆ ಮತ್ತು ಉಗ್ರರ ಮಧ್ಯೆ ನಡೆದ ಕಾಳಗದಲ್ಲಿ ಕನಿಷ್ಠ 100 ಎಲ್‌ಟಿಟಿಇ ಉಗ್ರರು ಮತ್ತು ಶ್ರೀಲಂಕಾ ನೌಕಾಪಡೆಯ ಇಬ್ಬರು ಸಿಬ್ಬಂದಿ ಸತ್ತಿದ್ದಾರೆ.

ಎಲ್‌ಟಿಟಿಇ ಉಗ್ರರನ್ನು ಒಳಗೊಂಡ 7 ದೋಣಿಗಳನ್ನು ನಾಶಪಡಿಸಲಾಯಿತು. ಎಲ್‌ಟಿಟಿಇ ಉಗ್ರರ ದಾಳಿಗೆ ತೀವ್ರ ಗಾಯಗೊಂಡ ಇಬ್ಬರು ಶ್ರೀಲಂಕಾ ನೌಕಾಪಡೆಯ ಸೈನಿಕರು ಆನಂತರ ಸತ್ತರು. ಕಾಣೆಯಾಗಿರುವ ಏಳು ಮಂದಿ ನೌಕಾಪಡೆಯ ಸಿಬ್ಬಂದಿ ಪತ್ತೆಗೆ ಭೂ ಹಾಗೂ ಜಲಮಾರ್ಗವಾಗಿ ಶೋಧ ಕಾರ್ಯ ನಡೆದಿದೆ. ಜಲಮಾರ್ಗವಾಗಿ ದಾಳಿ ನಡೆಸುವ ಎಲ್‌ಟಿಟಿಇ 35 ಉಗ್ರರು ಸೇರಿ ಒಟ್ಟು 100 ಉಗ್ರರು ಸತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.