ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಭಾನುವಾರ, 20–07–1997

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:00 IST
Last Updated 19 ಜುಲೈ 2022, 15:00 IST
   

‘ಕೃಷ್ಣಾನೀರುಬಳಕೆಅವಧಿ ವಿಸ್ತರಣೆಗೆ ಮನವಿ ಇಲ್ಲ’

ಬೆಳಗಾವಿ, ಜುಲೈ 19–ಕೃಷ್ಣಾನದಿ ನೀರಿನ ಬಳಕೆಗೆ ಬಚಾವತ್‌ ಆಯೋಗ ವಿಧಿಸಿರುವ 2,000ನೇ ಇಸವಿ ಮಿತಿಯನ್ನು ವಿಸ್ತರಿಸುವಂತೆ ಕರ್ನಾಟಕ ಸರ್ಕಾರ ಕೇಳುವುದಿಲ್ಲ ಎಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಕೆ.ಎನ್‌. ನಾಗೇಗೌಡ ಇಂದು ಹಿಡಕಲ್‌ನಲ್ಲಿ ಸ್ಪಷ್ಟಪಡಿಸಿದರು.

ಘಟಪ್ರಭಾ ಜಲಾಶಯದ ತಟದಲ್ಲಿನ ಹುನ್ನೂರು ಪ್ರವಾಸಿ ಮಂದಿರದಲ್ಲಿ ವರದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ‘ಬದಲಿಗೆ ಕರ್ನಾಟಕ ಪಾಲಿನ 734 ಟಿ.ಎಂ.ಸಿಗಿಂತ ಹೆಚ್ಚುವರಿ ನೀರನ್ನು ಹಂಚಿಕೊಳ್ಳುವ ಕುರಿತು ಆಂಧ್ರದ ಮುಖ್ಯಮಂತ್ರಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆಗೆ ಮಾತುಕತೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.

ADVERTISEMENT

ಕೃಷ್ಣಾನದಿ ಮತ್ತು ಅದರ ಉಪನದಿಗಳು ಸೇರಿ ಈ ಶತಮಾನದ ಅಂತ್ಯದವರೆಗೆ 734 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಬೇಕು ಎಂದು ಬಚಾವತ್‌ ಆಯೋಗ ತೀರ್ಪು ನೀಡಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.