‘ಕೃಷ್ಣಾಯೋಜನೆ: ಸಚಿವರ ಹೇಳಿಕೆ ವಸ್ತು ಸ್ಥಿತಿಗೆ ವಿರುದ್ಧ’
ಬೆಂಗಳೂರು, ಜುಲೈ 23– ‘ಕೃಷ್ಣಾಮೇಲ್ದಂಡೆಯೋಜನೆಕಾಮಗಾರಿಗಳು ಎರಡು ವರ್ಷದಲ್ಲಿ ಪೂರ್ಣಗೊಳ್ಳುವುದಾಗಿ ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರ ಹೇಳಿಕೆ ವಸ್ತು ಸ್ಥಿತಿಗೆ ವಿರುದ್ಧವಾಗಿದೆ. ಕೇವಲ ಪ್ರಚಾರಕ್ಕಾಗಿ ಅವರು ಹೀಗೆ ಹೇಳಿದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಇಂದು ಇಲ್ಲಿ ನುಡಿದರು.
‘ಯೋಜನೆಯ ಕಾಮಗಾರಿಗಳು ಕಳೆದ 2 ತಿಂಗಳಿಂದ ಸ್ಥಗಿತವಾಗಿವೆ. ಅನೇಕ ಕೆಲಸಗಳು ಇನ್ನೂ ಆರಂಭವೇ ಆಗಿಲ್ಲ. ಎರಡೇ ವರ್ಷಗಳಲ್ಲಿ ಪೂರ್ಣ ಗೊಳಿಸಿ ಬಚಾವತ್ ತೀರ್ಪಿನಂತೆ 2000 ಇಸವಿ ಒಳಗೆ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲಾಗುವುದು ಎಂಬುದು ಅವಾಸ್ತವಿಕ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.