ವೀರಪ್ಪನ್ ಸಂಕೇತ ಹಿಂಬಾಲಿಸಿದ ಸಂಪಾದಕ
ಬರಗೂರು ಅರಣ್ಯ ಪ್ರದೇಶ (ತಮಿಳುನಾಡು), ಜುಲೈ 21– ಕಾಡುಗಳ್ಳ ವೀರಪ್ಪನ್ ಜತೆ ಸಂಧಾನವನ್ನು ನಡೆಸಲು ಹೋಗಿರುವ ‘ನಕ್ಕೀರನ್’ ಪತ್ರಿಕೆಯ ಸಂಪಾದಕ ಕೆ.ಆರ್.ಗೋಪಾಲನ್ ಅವರು ಇಂದು ಬರಗೂರು ಅರಣ್ಯ ಪ್ರದೇಶದ ತಾಮ್ರಕೆರೆಯ (ತಾವರೆಕೆರೆ) ಸಮೀಪ ಅರಣ್ಯ ಪ್ರವೇಶಿಸಿರುವುದು ಖಚಿತವಾಗಿದೆ.
ನಾಲ್ರೋಡ್– ಅಂತಿಯೂರು ನಡುವಿನ 60 ಕಿ.ಮೀ. ದೂರದ ಈ ಅರಣ್ಯಪ್ರದೇಶದಲ್ಲಿ ಗೋಪಾಲನ್ ಅವರ ಪ್ರವೇಶಕ್ಕೆ ನೆರವಾಗುವಂತೆ ತಮಿಳುನಾಡು ಈ ಭಾಗದ ಅರಣ್ಯ ಸಿಬ್ಬಂದಿಯನ್ನು ನಿನ್ನೆಯೇ ಕಾಡಿನಿಂದ ನಾಡಿಗೆ ವಾಪಸ್ಸು ಕರೆಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.