ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ, 12–07–1996

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 19:31 IST
Last Updated 11 ಜುಲೈ 2021, 19:31 IST
   

ಮುಂದುವರಿದ ಪ್ರತಿಭಟನೆ: ರಾಜ್ಯಸಭೆ ಮುಂದಕ್ಕೆ

ನವದೆಹಲಿ, ಜುಲೈ 11 (ಯುಎನ್‌ಐ, ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯು ಸಂಸತ್ತಿನ ಅಧಿವೇಶನದ ಎರಡನೆಯ ದಿನವಾದ ಇಂದೂ ಕಲಾಪವನ್ನು ಗೊಂದಲದಲ್ಲಿ ಮುಳುಗಿಸಿತು. ಲೋಕಸಭೆಯಲ್ಲಿ ಬಿಜೆಪಿಯು ಮಂಡಿಸಲು ಯತ್ನಿಸಿದ ಹೊಸ ನಿಲುವಳಿ ಸೂಚನೆಯನ್ನು ಸ್ಪೀಕರ್ ಅವರು ತಿರಸ್ಕರಿಸಿದರೆ, ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಹೊಸ ನಿಲುವಳಿ ಸೂಚನೆಯನ್ನು ಮಂಡಿಸಲು ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಯತ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.