ಲಾಲೂ ನೇತೃತ್ವದ ಹೊಸ ಪಕ್ಷ ರಾಷ್ಟ್ರೀಯ ಜನತಾದಳ ಉದಯ
ನವದೆಹಲಿ, ಜುಲೈ 5 (ಪಿಟಿಐ, ಯುಎನ್ಐ)–ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಬೆಂಬಲಿಗರು ಇಂದು ‘ರಾಷ್ಟ್ರೀಯ ಜನತಾದಳ’ ಎಂಬ ಹೊಸ ಪಕ್ಷವನ್ನು ಘೋಷಿಸಿದರಿಂದಾಗಿ ಜನತಾದಳ ನಿರೀಕ್ಷೆಯಂತೆ ಇಬ್ಭಾಗವಾಯಿತು. ಲಾಲೂ ಪ್ರಸಾದ್ ನೂತನ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಪರ್ಯಾಯ ಸಮಾವೇಶದಲ್ಲಿ ಹೊಸ ಪಕ್ಷದ ರಚನೆಯನ್ನು ಪ್ರಕಟಿಸಲಾಯಿತು. ಲಾಲೂ ಅವರ ಹೆಸರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮಿಳುನಾಡಿನ ಪ್ರತಿನಿಧಿಯಹೊಬ್ಬರು ಸೂಚಿಸಿದಾಗ ಸಮಾವೇಶ ಒಕ್ಕೊರಲಿನಿಂದ ಅದಕ್ಕೆ ಸಮ್ಮತಿಯನ್ನು ಸೂಚಿಸಿತು. ಸಮಾವೇಶವನ್ನು ಲಾಲೂ ಪ್ರಸಾದ್ ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.