ವಿದೇಶಿ ಹಣ: ತನಿಖೆ ಬಳಿಕ ಗೌಡರ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ಕಾಂಗ್ರೆಸ್
ನವದೆಹಲಿ, ಮೇ 20 (ಪಿಟಿಐ)– ‘ವಿದೇಶಿ ಕಂಪೆನಿಗಳಿಂದ ಕಾಂಗ್ರೆಸ್ ಪಕ್ಷವು 3.75 ಕೋಟಿ ರೂಪಾಯಿ ಹಣ ಪಡೆದದ್ದಕ್ಕಾಗಿ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವ ಇಂಧ್ರಜಿತ್ ಗುಪ್ತಾ ಅವರು ಮಾರ್ಚ್ 27ರಂದು ಅನುಮತಿ ನೀಡಿದರು. ಇದಾದ ಮೂರು ದಿನಗಳ ಬಳಿಕ ಕಾಂಗ್ರೆಸ್ ಪಕ್ಷವು ದೇವೇಗೌಡರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತು’ ಎಂದು ದೆಹಲಿಯ ಹೈಕೋರ್ಟಿಗೆ ಇಂದು ಕೇಂದ್ರ ಸರ್ಕಾರ ತಿಳಿಸಿತು.
ಸರ್ಕಾರದ ಪರವಾಗಿ ಇಂದು ನ್ಯಾಯಾಲಯದಲ್ಲಿ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ಡಾ. ಅಭಿಷೇಕ್ ಮನು ಸಿಂಘ್ವಿ ಈ ವಿಷಯವನ್ನು ತಿಳಿಸಿದರು. ‘ಗೃಹ ಸಚಿವರ ಅನುಮತಿ ಬಳಿಕ ಮಾರ್ಚ್ 29ರಂದು ಈ ವಿದೇಶಿ ದೇಣಿಗೆಯ ಬಗ್ಗೆ ಫೆರಾ ಅಧಿಕಾರಿಗಳು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದರು. 30ರಂದು ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಲಾಯಿತು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.