ADVERTISEMENT

25 ವರ್ಷಗಳ ಹಿಂದೆ: ಗುರುವಾರ, 22–05–1997

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:45 IST
Last Updated 21 ಮೇ 2022, 19:45 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮೇವು ಹಗರಣ: ಸಿಬಿಐ ಸ್ಪಷ್ಟನೆ ಬಳಿಕ ನಿರ್ಧಾರ– ಕಿದ್ವಾಯಿ

ಪಾಟ್ನಾ, ಮೇ 21(ಪಿಟಿಐ)– ಸಿಬಿಐನಿಂದ ಕೆಲವು ಸ್ಪಷ್ಟೀಕರಣಗಳು ಬರಬೇಕಾಗಿದ್ದು, ಅವು ಬಂದ ಬಳಿಕ ಮೇವು ಹಗರಣದಲ್ಲಿ ಮುಖ್ಯಮಂತ್ರಿ ಲಾಲೂ ಯಾದವ್‌ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಬಿಹಾರದ ರಾಜ್ಯಪಾಲರಾದ ಡಾ. ಎ.ಆರ್‌. ಕಿದ್ವಾಯಿ ಅವರು ಇಂದು ಇಲ್ಲಿ ಹೇಳಿದ್ದಾರೆ.

ಕೆಲವು ಪ್ರಮುಖ ಅಂಶಗಳ ಬಗ್ಗೆ ಸಿಬಿಐನಿಂದ ಸ್ಪಷ್ಟೀಕರಣ ಕೇಳಿದ್ದೇನೆ. ಆ ಸ್ಪಷ್ಟೀಕರಣಗಳು ನನ್ನ ಕೈ ಸೇರಿದ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲು ನಾನು ಸಮರ್ಥನಾಗುತ್ತೇನೆ’ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.