ADVERTISEMENT

25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 22:32 IST
Last Updated 11 ಜನವರಿ 2026, 22:32 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

ಬೆಂಗಳೂರು, ಜ. 11– ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ಬರಾಜು ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಮುಂಬೈನಲ್ಲಿ ವಶಕ್ಕೆ ತೆಗೆದುಕೊಂಡು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧನಕ್ಕೊಳಗಾಗಿರುವ ಸೈಯದ್‌ ಹಾಗೂ ಆರೀಫ್‌ ಭೂಗತ ಜಗತ್ತಿನ ಮುತ್ತಪ್ಪ ರೈ ಹಾಗೂ ಆತನ ಬಲಗೈಬಂಟ ಬನ್ನಂಜೆ ರಾಜನ ಆದೇಶದಂತೆ ಈ ಕೊಲೆ ಯೋಜಿಸಿದ್ದು, ಬಾಡಿಗೆ ಹಂತಕರ ಸಹಾಯದಿಂದ ಕೊಲೆ ಮಾಡಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುಜರಾತ್‌ಗೆ ರಾಜ್ಯದ ಮೆಕ್ಕೆಜೋಳ

ನವದೆಹಲಿ, ಜ. 11– ಕರ್ನಾಟಕದಿಂದ ನಾಲ್ಕು ಲಕ್ಷ ಕ್ವಿಂಟಲ್ ಮೆಕ್ಕೆಜೋಳ
ವನ್ನು ಗುಜರಾತ್‌ ಸರ್ಕಾರ ಖರೀದಿ ಮಾಡಲಿದೆ.

ADVERTISEMENT

ಮುಂದಿನ ಎಂಟು ತಿಂಗಳ ಅವಧಿಯಲ್ಲಿ ಈ ಖರೀದಿ ನಡೆಯ ಲಿದ್ದು, ಮೊದಲ ಹಂತದಲ್ಲಿ 50 ಸಾವಿರ ಕ್ವಿಂಟಲ್ ಮೆಕ್ಕೆಜೋಳವನ್ನು ಖರೀದಿಸಲು ಗುಜರಾತ್‌ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಕೆ. ಲಹರಿ ಇಂದು ಸಮ್ಮತಿ ಸೂಚಿಸಿದರು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ರಾಜ್ಯ ಸಚಿವ ಡಿ.ಬಿ. ಇನಾಂದಾರ್‌ ಅವರು ಇಂದು ‘ಪ್ರಜಾವಾಣಿ’ಗೆ ಮಾಹಿತಿ
ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.